ಪ್ರಜಾಸ್ತ್ರ ಸುದ್ದಿ
ದಾವಣಗೆರೆ: ಸ್ಯಾಂಡಲ್ ವುಡ್ ಸಾಹಸಸಿಂಹ ದಿವಂಗತ ಡಾ.ವಿಷ್ಣುವರ್ಧನ ಅವರ ಅಪ್ಪಟ ಅಭಿಮಾನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷ್ಣು ದಾದಾ ಹುಟ್ಟು ಹಬ್ಬವನ್ನ ಪ್ರತಿ ವರ್ಷ ವಿಶಿಷ್ಟವಾಗಿ ಆಚರಿಕೊಂಡು ಬರ್ತಿದ್ದ 50 ವರ್ಷದ ಲೋಕೇಶ ನೇಣಿಗೆ ಶರಣಾಗಿದ್ದಾರೆ.
ಗುರುವಾರ ರಾತ್ರಿ ಈ ಘಟನೆ ನಡೆದಿದೆ. ನಗರದ ಪಿ.ಬಿ ರಸ್ತೆಯಲ್ಲಿ ಬೀಡಾ ಅಂಗಡಿ ವ್ಯಾಪಾರ ಮಾಡ್ತಿದ್ದ ಲೋಕೇಶ, ಪ್ರತಿ ವರ್ಷ ವಿಷ್ಣುವರ್ಧನ ಅವರ ಬರ್ಥ್ ಡೇ ಅನ್ನು ವಿಶಿಷ್ಟವಾಗಿ ಆಚರಿಸುವ ಮೂಲಕ ಇಲ್ಲಿನ ಜನಕ್ಕೆ ಚಿರಪರಿಚಿತರಾಗಿದ್ರು.
ಆತ್ಮಹತ್ಯೆಗೆ ಕಾರಣವೇನೆಂದು ತಿಳಿದು ಬಂದಿಲ್ಲ. ಸ್ಥಳಕ್ಕೆ ಕೆಟಿಜೆ ನಗರ ಠಾಣೆ ಪೊಲೀಸ್ರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಿದ್ದಾರೆ.