ಮೈಸೂರಿನಲ್ಲಿ ದಿ.ನಟ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ: ಸಿಎಂ ಬೊಮ್ಮಾಯಿ

191

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮೈಸೂರಿನಲ್ಲಿ ದಿವಂಗತ ನಟ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಹಾಗೂ ಮ್ಯೂಸಿಯಂ ನಿರ್ಮಾಣ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ಹೇಳಿದ್ದಾರೆ. ವಿಷ್ಣು ನಿವಾಸ ನಿವೀಕರಣದ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ವಿಷ್ಣುವರ್ಧನ್ ಅವರು ಓರ್ವ ಮೇರು ನಟ. ಭಾರತಿ ವಿಷ್ಣುರ್ವಧನ್ ಅವರು ಕಷ್ಟಪಟ್ಟು ಮನೆಯನ್ನು ತುಂಬಾ ಅದ್ಬುತ್ ವಾಗಿ ನಿರ್ಮಿಸಿದ್ದಾರೆ. ವಿಷ್ಣು ಸ್ಮಾರಕ, ಮ್ಯೂಸಿಯಂ ನಿರ್ಮಿಸುತ್ತೇವೆ ಅನ್ನೋ ಭರವಸೆ ನೀಡಿದರು. ಇದೆ ವೇಳೆ ಹಿರಿಯ ನಟಿ, ವಿಷ್ಣು ಪತ್ನಿ ಭಾರತಿ ವಿಷ್ಣುವರ್ಧನ್, ಅಳಿಯ, ನಟ ಅನಿರುದ್ಧ್ ಅವರಿಗೂ ಶುಭ ಕೋರಿದರು.

ವಿಷ್ಣುವರ್ಧನ್ ಬೆಂಗಳೂರಿಗೆ ಬಂದಾಗ ಶಂಕರಪುರಂನಲ್ಲಿ ಬಾಡಿಗೆ ಮನೆಯಲ್ಲಿದ್ದರು. ಸಿನಿಮಾ ಕ್ಷೇತ್ರದಲ್ಲಿ ಒಂದು ಹಂತಕ್ಕೆ ಬರುವ ತನಕ ಬಾಡಿಗೆ ಮನೆಯಲ್ಲಿಯೇ ವಾಸವಾಗಿದ್ದರು. ನಂತರ ಜಯನಗರದ 4ನೇ ಬ್ಲಾಕ್ ನಲ್ಲಿ ನಿವೇಶನ ಖರೀದಿಸಿ ಮನೆ ನಿರ್ಮಿಸಿದರು. ಇದೀಗ ಮನೆಯ ಹೊರಾಂಗಣವನ್ನು ಕೆಡವಿ ಮರು ವಿನ್ಯಾಸಗೊಳಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!