ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಸ್ಯಾಂಡಲ್ ವುಡ್ ಸಾಹಸಸಿಂಹ, ನಟ ಭಾರ್ಗವ ಡಾ.ವಿಷ್ಣುವರ್ಧನ ಅವರ ಪ್ರತಿಮೆಯನ್ನ ಯಾರೋ ಕಿಡಿಗೇಡಿಗಳು ಒಡೆದು ಹಾಕಿದ್ದಾರೆ. ಈ ಬಗ್ಗೆ ನಾಡಿನ ತುಂಬಾ ಆಕ್ರೋಶ ವ್ಯಕ್ತವಾಗಿದೆ. ಕಿಡಿಗೇಡಿಗಳು ಸಿಕ್ರೆ ಸಾಕು ಅವರು ಜನ್ಮ ಜಾಲಾಡಲು ಅಭಿಮಾನಿಗಳು ಕಾಯುತ್ತಿದ್ದಾರೆ.
ಇನ್ನು ಡಿ ಬಾಸ್ ದರ್ಶನ, ನಟ, ವಿಷ್ಣು ಅಳೆಯ ಅನಿರುದ್ಧ ಸೇರಿದಂತೆ ಚಿತ್ರರಂಗದ ಸ್ಟಾರ್ಸ್ ಕಿಡಿ ಕಾರಿದ್ದಾರೆ. ಇನ್ನು ಕಿಚ್ಚ ಸುದೀಪ ಟ್ವೀಟರ್ ಮೂಲಕ ಮಾತ್ನಾಡಿ, ಕಡಿಗೇಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಮೂರ್ತಿ ಒಡೆದವರು ದಯವಿಟ್ಟು ಸಿಕ್ಕಿಹಾಕಿಕೊಳ್ಳಬೇಡಿ. ಸಿಕ್ಕದ್ರೆ ಮುಂದೆ ಆಗೋದನ್ನ ತಡೆಯೋದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ದೇಶ ಬಿಟ್ಟು ಓಡು ಹೋಗಬೇಕಾಗುತ್ತೆ ಎಂದು ವಾರ್ನ್ ಮಾಡಿದ್ದಾರೆ.