ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ದಂಧೆಗೆ ಸಂಬಂಧಿಸಿದಂತೆ ಸಿಸಿಬಿ ಮತ್ತೆ ಮೂವರಿಗೆ ನೋಟಿಸ್ ನೀಡಿದೆ. ಇದರಲ್ಲಿ ಖ್ಯಾತ ನಿರೂಪಕ ಅಕುಲ್ ಬಾಲಾಜಿ, ನಟ ಸಂತೋಷಕುಮಾರ ಹಾಗೂ ಮಾಜಿ ಶಾಸಕ ಆರ್.ವಿ ದೇವರಾಜ ಅವರ ಮಗ ಯುವರಾಜಗೆ ಸಿಸಿಬಿ ನೋಟಿಸ್ ನೀಡಿದೆ.
ಈ ಮೂವರು ನಾಳೆ ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಅಕುಲ್ ಬಾಲಾಜಿ ಹೈದ್ರಾಬಾದ್ ನಲ್ಲಿದ್ದು, ನಟ ಸಂತೋಷಕುಮಾರ ಮೈಸೂರಿನಲ್ಲಿದ್ದು, ನಾಳೆ ಬೆಳಗ್ಗೆ ವಿಚಾರಣೆಗೆ ಬರುವುದಾಗಿ ತಿಳಿಸಿದ್ದಾರೆ. ಇನ್ನು ಮಾಜಿ ಶಾಸಕ ಆರ್.ವಿ ದೇವರಾಜ ಅವರ ಮಗನ ಕಥೆ ಏನು ಅನ್ನೋದು ತಿಳಿಯಬೇಕಿದೆ.