ಪ್ರಜಾಸ್ತ್ರ ಸುದ್ದಿ
ವಿಜಯಪುರ: ಕೆಆರ್ ಎಸ್ ಡ್ಯಾಮ್ ಬಿರುಕಿಗೆ ಸಂಬಂಧಿಸಿದಂತೆ ಜೆಡಿಎಸ್ ನಾಯಕರು ಹಾಗೂ ಸಂಸದೆ ಸುಮಲತಾ ನಡುವೆ ವಾಗ್ವಾದ ನಡೆದಿದೆ. ಈಗ ಈ ಬಗ್ಗೆ ಮಾತ್ನಾಡಿರುವ ಗಣಿ ಸಚಿವ ಮುರುಗೇಶ ನಿರಾಣಿ, ಕೆಆರ್ ಎಸ್ ಡ್ಯಾಂನಲ್ಲಿ ಬಿರುಕು ಬಿಟ್ಟಿಲ್ಲ ಎಂದು ಹೇಳಿದ್ದಾರೆ.
ಜಿಲ್ಲೆಯ ಕೊಲ್ಹಾರದಲ್ಲಿ ಗಣಿ ಸಚಿವ ಮುರುಘೇಶ ನಿರಾಣಿ ಮಾತ್ನಾಡಿದ್ದು, ಕೆಆರ್ ಎಸ್ ಸುತ್ತಮುತ್ತ 10 ಕಿಲೋ ಮೀಟರ್ ನಷ್ಟು ಗಣಿಗಾರಿಕೆ ಬಂದ್ ಮಾಡಲಾಗಿದೆ. ಡ್ಯಾಂ ಬಿರುಕು ಬಿಟ್ಟಿರುವುದು ಕೇವಲ ಊಹಾಪೋಹಗಳು ಮಾತ್ರ. ರೈತರು ಊಹಾಪೋಹಗಳಿಗೆ ಕಿವಿ ಕೊಡಬೇಡಿ. ಯಾವುದೇ ಅಪಾಯವಿಲ್ಲ ಎಂದಿದ್ದಾರೆ.