ಯೋಗೇಶಗೌಡ ಕೊಲೆ ಪ್ರಕರಣ: ಕೆಎಎಸ್ ಅಧಿಕಾರಿ ಬಂಧನ

282

ಪ್ರಜಾಸ್ತ್ರ ಸುದ್ದಿ

ಗದಗ: ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯೋಗೇಶಗೌಡ ಕೊಲೆ ಪ್ರಕರಣ ಸಂಬಂಧ, ಮಾಜಿ ಸಚಿವ ವಿನಯ ಕುಲ್ಕರ್ಣಿ ಆಪ್ತ ಕಾರ್ಯದರ್ಶಿಯಾಗಿದ್ದ, ಕೆಎಎಸ್ ಅಧಿಕಾರಿಯನ್ನ ಬಂಧಿಸಲಾಗಿದೆ. ಗದಗನಲ್ಲಿ ಸೋಮು ನ್ಯಾಮಗೌಡ ಅನ್ನೋ ಅಧಿಕಾರಿಯನ್ನ ಬಂಧಿಸಲಾಗಿದೆ.

ಸೋಮ ನ್ಯಾಮಗೌಡ

ಬಂಧಿಸಿರುವ ಅಧಿಕಾರಿಯನ್ನ ಧಾರವಾಡ ಉಪನಗರ ಠಾಣೆಗೆ ಕರೆದುಕೊಂಡು ಬರಲಾಗ್ತಿದೆ. ಮಾಜಿ ಸಚಿವ ವಿನಯ ಕುಲ್ಕರ್ಣಿ ಜಾಮೀನು ಅರ್ಜಿಯನ್ನ ಹೈಕೋರ್ಟ್ ತಿರಸ್ಕರಿಸಿದೆ. ಹೀಗಾಗಿ ಸುಪ್ರೀಂ ಕೋರ್ಟ್ ಗೆ ಹೋಗಿದ್ದು, ಆ ಅರ್ಜಿಯ ವಿಚಾರಣೆ ಇಂದು ನಡೆಯುತ್ತಿದೆ. ಸೋಮು ನ್ಯಾಮಗೌಡ ಪ್ರಸ್ತುತ ಗದಗನಲ್ಲಿ ಎಪಿಎಂಸಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸ್ತಿದ್ದಾರೆ.

ಯೋಗೇಶಗೌಡ ಕೊಲೆ ಪ್ರಕರಣದಲ್ಲಿ, ಘಟನೆ ನಡೆದ ಬಳಿಕ ಆರೋಪಿಗಳನ್ನ ಸೋಮು ನ್ಯಾಮಗೌಡ ಹಾಗೂ ವಿನಯ ಕುಲ್ಕರ್ಣಿ ಭೇಟಿಯಾಗಿದ್ರು. ಇದರ ಸಾಕ್ಷಾಧಾರ ಕಲೆ ಹಾಕಿದ ಸಿಬಿಐ ಅಧಿಕಾರಿಗಳು ಇಂದು ಬೆಳಗ್ಗೆ ಬಂಧಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!