ಪೊಲೀಸರಿಂದಲೇ ಪೋಕ್ಸೋ ಕಾಯ್ದೆ ಉಲ್ಲಂಘನೆ?

260

ಪ್ರಜಾಸ್ತ್ರ ಸುದ್ದಿ

ಚಿತ್ರದುರ್ಗ: ಮುರುಘಾಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಸ್ವಾಮೀಜಿ ಸೇರಿ ಐವರ ವಿರುದ್ಧ ಲೈಂಗಿಕ ಕಿರುಕುಳದ ಪ್ರಕರಣ ದಾಖಲಾಗಿದೆ. ಈ ವೇಳೆ ಪೊಲೀಸರು ದೊಡ್ಡದೊದ್ದು ಯಡವಟ್ಟು ಮಾಡಿದ್ದಾರಂತೆ. ಪ್ರಕರಣದ ಎ-1 ಆರೋಪಿ, ಸ್ವಾಮೀಜಿ ಇರುವ ಹೊತ್ತಿನಲ್ಲಿಯೇ ಸ್ಥಳ ಮಹಜರು ಮಾಡಲಾಗಿದೆಯಂತೆ.

ಮಕ್ಕಳನ್ನು ಚಿತ್ರದುರ್ಗಕ್ಕೆ ಕರೆದುಕೊಂಡು ಬಂದ ಪೊಲೀಸರು, ಮಠದಲ್ಲಿ ಆರೋಪಿ ಸ್ವಾಮೀಜಿ ಇರುವಾಗ ಸ್ಥಳ ಪರಿಶೀಲನೆ ಮಾಡಿರುವುದು ಪೊಕ್ಸೋ ಕಾಯ್ದೆಯನ್ನೇ ಉಲ್ಲಂಘಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಸಂತ್ರಸ್ತ ಮಕ್ಕಳ ಮೇಲೆ ಪ್ರಭಾವ ಬೀರುವುದಿಲ್ಲವಾ ಅನ್ನೋ ಪ್ರಶ್ನೆ ಮೂಡಿದೆ.

ಇಂದು ಸಂತ್ರಸ್ತ ಮಕ್ಕಳು ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ ಬಳಿಕ, ಸ್ವಾಮೀಜಿ ಸೇರಿ ಐವರಿಗೆ ನೋಟಿಸ್ ನೀಡಬಹುದು. ಹೀಗಾಗಿ ಅವರ ಚಲನವಲನದ ಮೇಲೆ ನಿಗಾ ವಹಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!