ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಸದಾ ಕೋಮು ದಳ್ಳುರಿಗೆ ಕಾರಣವಾಗುತ್ತಿರುವ ಶಿವಮೊಗ್ಗದಲ್ಲಿ ಸಾವರ್ಕರ್ ಫ್ಲೆಕ್ಸ್ ಹರಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ದೇಶ ವಿರೋಧಿ ಪಿಎಫ್ಐ, ಎಸ್ ಡಿಪಿಐಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.
ಹಿಂದೂ ಸಮಾಜ ಎದ್ದರೆ ಮುಸಲ್ಮಾನರು ಏನಾಗುತ್ತಾರೆ. ಆದರೆ, ಹಿಂದೂಗಳು ಶಾಂತಿ ಪ್ರಿಯರು. ಗಣಪತಿ ಹಬ್ಬಕ್ಕೆ ಅಡ್ಡ ಬಂದರೆ ಸರಿಯಿರಲ್ಲ. ನಿಮ್ಮ ಹಬ್ಬಕ್ಕೆ ನಾವು ಬೆಂಬಲ ನೀಡಲ್ವಾ ಎಂದು ಕಿಡಿ ಕಾರಿದರು. ಹಿಂದೆ ಮುಸಲ್ಮಾನ ಸಮಾಜದ ಹಿರಿಯರು ಶಾಂತಿ ಕಾಪಾಡಿದ್ದಾರೆ. ಈಗಿನವರು ನಿಮ್ಮ ಯುವಕರಿಗೆ ಬುದ್ಧಿ ಹೇಳಬೇಕು. ಇಲ್ಲದಿದ್ದರೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತೆ ಎಂದರು.