ಎಸಿಬಿ ಬಲೆಗೆ ಬಿದ್ದ ಆಲಮೇಲ ಅಧಿಕಾರಿ

793

ಆಲಮೇಲ: ಪಟ್ಟಣದ ಹೆಸ್ಕಾಂ ಶಾಖಾಧಿಕಾರಿ ಎಸಿಬಿ‌ ಬಲೆಗೆ ಬಿದ್ದಿದ್ದಾರೆ. ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದ ಹೆಸ್ಕಾಂ ಶಾಖಾಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಬಸವರಾಜ ಮಣ್ಣೂರ ಎಸಿಬಿ ಬಲೆಗೆ ಬಿದ್ದ ಹೆಸ್ಕಾಂ ಅಧಿಕಾರಿಯಾಗಿದ್ದಾರೆ. ವಿದ್ಯುತ್ ಟ್ರಾನ್ಸಫಾರ್ಮರ್ ಗೆ ಸಹಿ ಮಾಡಿ ಕೊಡಲು ರೈತರೊಬ್ಬರಿಂದ 10 ಸಾವಿರ‌ ರೂಪಾಯಿ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ರೈತ ಲಗಮಣ್ಣ ಎಸಿಬಿ ದೂರು‌ ನೀಡಿದ್ರು.

ರೈತ ನೀಡಿದ ದೂರಿನ ಹಿನ್ನೆಲೆ ದಾಳಿ ನಡೆಸಿದ ವಿಜಯಪುರ ಎಸಿಬಿ ಡಿಎಸ್ಪಿ ಜೆ ರಘು, ಇನ್ಸ್ಪೆಕ್ಟರ್ ಗಣಾಚಾರಿ ಬಳಗಾನೂರ ಅವರು ದಾಳಿ ನಡೆಸಿ, ಹೊಟೇಲ್ ಒಂದರಲ್ಲಿ ರೈತನಿಂದ ಲಂಚ ಸ್ವೀಕರಿಸುವಾಗ ಹಿಡಿದಿದ್ದಾರೆ.




Leave a Reply

Your email address will not be published. Required fields are marked *

error: Content is protected !!