ಬಸ್-ಕ್ರೂಸರ್ ಅಪಘಾತ: ಸಾವಿನ ಸಂಖ್ಯೆ 8ಕ್ಕೆ ಏರಿಕೆ

390

ಪ್ರಜಾಸ್ತ್ರ ಸುದ್ದಿ

ಚಿತ್ರದುರ್ಗ: ಭಾನುವಾರ ನಸುಕಿನ ಜಾವದಲ್ಲಿ ಸಂಭವಿಸಿದ್ದ ಬಸ್ ಹಾಗೂ ಕ್ರೂಸರ್ ವಾಹನದ ನಡುವಿನ ಅಪಘಾತಕ್ಕೆ ಸಂಬಂಧಿಸಿದಂತೆ ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೂವರು ಸಾವನ್ನಪ್ಪಿದ್ದಾರೆ.

ದೇವದುರ್ಗ ಮೂಲದ ನಾಗಮ್ಮ(42), ಪುತ್ರ ಜ್ಯೋತಿ ಬಸವ(20) ಹಾಗೂ ಬುಡ್ಡಪ್ಪ(40) ಅನ್ನೋ ಮೂವರು, ದಾವಣಗೆರೆಯ ಎಸ್.ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಅಪಘಾತ ನಡೆದಾಗ ಸ್ಥಳದಲ್ಲಿಯೇ 5 ಜನ ಸಾವನ್ನಪ್ಪಿದ್ದರು. ಇನ್ನು 14 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!