ಬೈಕ್ ಅಪಘಾತದಲ್ಲಿ ವರದಿಗಾರ ಸಾವು

508

ಹಾವೇರಿ: ಬೈಕ್ ಹಾಗೂ ಟ್ರ್ಯಾಕ್ಟರ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಪ್ರಜಾವಾಣಿಯ ವರದಿಗಾರ 30 ವರ್ಷದ ಎಂ.ಸಿ ಮಂಜುನಾಥ ಮೃತಪಟ್ಟಿದ್ದಾರೆ.

ರಾತ್ರಿ ಕೆಲಸ ಮುಗಿಸಿಕೊಂಡು ಬೈಕ್ ಮೇಲೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯಲ್ಲಿರುವ ಅಕ್ಕನ ಮನೆಗೆ ಹೊರಟಿದ್ದ ವೇಳೆ, ಹಾವೇರಿಯ ಕೊಡಗನೂರು ಹತ್ತಿರದ ಪಿ.ಬಿ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ತಕ್ಷಣ ಟ್ರ್ಯಾಕ್ಟರ್ ಚಾಲಕ ಪರಾರಿಯಾಗಿದ್ದಾನೆ. ಮಾಯಕೊಂಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪ್ರಜಾವಾಣಿಯ ಬೆಂಗಳೂರು ಕಚೇರಿಯಲ್ಲಿ ಕ್ರೈಂ ವರದಿಗಾರರಾಗಿದ್ದ ಮಂಜುನಾಥ ಕಳೆದ ಮೇ ತಿಂಗಳಲ್ಲಿ ಹಾವೇರಿ ವರದಿಗಾರರಾಗಿ ವರ್ಗಾವಣೆಗೊಂಡಿದ್ರು. ಶಿವಮೊಗ್ಗ ಜಿಲ್ಲೆಯವರಾದ ಮಂಜುನಾಥ ಕುವೆಂಪು ವಿವಿಯಲ್ಲಿ ಪತ್ರಿಕೋದ್ಯಮ ಮುಗಿಸಿದ್ದಾರೆ.

ಎಂ.ಸಿ ಮಂಜುನಾಥ ಸಾವಿಗೆ ಸಂತಾಪ ಸೂಚಿಸಿರುವ ಸಿಎಂ 5ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!