ಸಿಂದಗಿ ಬಳಿ ಆ್ಯಕ್ಸಿಡೆಂಟ್ 20 ಜನಕ್ಕೆ ಗಾಯ

752

ಸಿಂದಗಿ: ನಗರದ ಶಹಾಪುರ ಬೈಪಾಸ್ ಬಳಿ ಟಂಟಂ ವಾಹನಕ್ಕೆ ಕ್ರೂಸರ್ ಹೊಡೆದ ಪರಿಣಾಮ ಟಂಟಂನಲ್ಲಿದ್ದ 20 ಜನಕ್ಕೆ ಗಾಯಗಳಾಗಿವೆ.

ಪಟ್ಟಣದ ಶಹಾಪೂರ ಬೈಪಾಸ್ ರಸ್ತೆಯ ತಿರುವಿನಲ್ಲಿ ಕೂಲಿ ಕಾರ್ಮಿಕರನ್ನ ತುಂಬಿಕೊಂಡು ಹೊರಟಿದ್ದ ಟಂಟಂಗೆ ಕ್ರೂಸರ್ ಡಿಕ್ಕಿ ಹೊಡೆದಿದೆ. ಇದರಲ್ಲಿದ್ದ ಎಲ್ಲರಿಗೂ ಗಾಯಗಳಾಗಿದ್ದು ಅದೃಷ್ಟವಶಾತ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಿಂದಗಿ ತಾಲೂಕಿನ ಕೆರೂಟಗಿ ಗ್ರಾಮದ 20 ಮಹಿಳಾ ಕೂಲಿ ಕಾರ್ಮಿಕರು, ಮೋರಟಗಿ ಬಳಿಯ ತೋಟಕ್ಕೆ ಕೆಲಸಕ್ಕೆ ಹೋಗಿದ್ರು. ಸಂಜೆ 4 ಗಂಟೆಗೆ ತಮ್ಮ ಗ್ರಾಮಕ್ಕೆ ವಾಪಸ್ ಆಗ್ತಿದ್ದ ವೇಳೆ, ವಿಜಯಪುರದಿಂದ ಕೆಂಭಾವಿ ಕಡೆ ಹೊರಟಿದ್ದ ಕ್ರೂಸರ್ ಡಿಕ್ಕಿ ಹೊಡೆದಿದೆ. ಗಾಯಾಳುಗಳಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಘಟನಾ ಸ್ಥಳಕ್ಕೆ ಸಿಂದಗಿ ಪೊಲೀಸರು ಭೇಟಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!