ಪ್ರಜಾಸ್ತ್ರ ಸುದ್ದಿ
ಅಣ್ಣಿಗೇರಿ: ಕಾರು ಹಾಗೂ ಕ್ರೂಸರ್ ನಡುವೆ ಬುಧುವಾರ ಬೆಳಗಿನ ಜಾವ ಸಂಭವಿಸಿದ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಘಟನೆ ನಡೆದಿದೆ. ಅಣ್ಣಿಗೇರಿ ಸಮೀಪದ ಗದಗ ರಸ್ತೆಯ ದುಂದೂರ ಹತ್ತಿರ ಈ ಘಟನೆ ನಡೆದಿದೆ.
ಸಣ್ಣ ಗಂಗಣ್ಣ(52), ನಾಗಮ್ಮ(48), ಹನುಮಂತ(37) ಹಾಗೂ ಈರಣ್ಣ(24) ಅನ್ನೋ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನು ಗಾಯಗೊಂಡಿರುವ ಸಣ್ಣ ಈರಣ್ಣ(50) ಹಾಗೂ ಲಕ್ಷ್ಮೀ(20) ಎಂಬುವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲರ ರಾಯಚೂರು ಜಿಲ್ಲೆಯ ಮಾನ್ವಿ ಮೂಲದವರೆಂದು ತಿಳಿದು ಬಂದಿದೆ.
ಪಾರ್ಶ್ವವಾಯು ಚಿಕಿತ್ಸೆಗಾಗಿ ಕಾರವಾರದ ಹಳಗಾ ಗ್ರಾಮಕ್ಕೆ ಹೊರಟಿದ್ರು. ಕ್ರೂಸರ್ ಗಾಡಿ ಹುಬ್ಬಳ್ಳಿಯಿಂದ ಬಳ್ಳಾರಿಗೆ ದಿನಪತ್ರಿಕೆ ವಿತರಣೆಗೆ ಹೊರಟಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.