ದಾಖಲೆಗಾಗಿ ಎತ್ತುಗಳಿಗೆ ಹಿಂಸೆ ನೀಡಿದವರ ವಿರುದ್ಧ ಕೇಸ್

322

ಪ್ರಜಾಸ್ತ್ರ ಸುದ್ದಿ

ಮಂಡ್ಯ: ಮದ್ದೂರು ತಾಲೂಕಿನ ಎಚ್.ಮಲ್ಲಿಗೆರೆ ತಾಲೂಕಿನಲ್ಲಿ ಕಳೆದ ಎರಡ್ಮೂರು ದಿನಗಳ ಹಿಂದೆ ಜೋಡೆತ್ತುಗಳ ಗಾಡಿಯಲ್ಲಿ 14 ಟನ್ ಗೂ ಅಧಿಕ ಕಬ್ಬು ಹೇರಿ 3 ಕಿಲೋ ಮೀಟರ್ ತನಕ ಸಾಗಿಸಲಾಗಿತ್ತು. ದಾಖಲೆಗಾಗಿ ಎತ್ತುಗಳಿಗೆ ಹಿಂಸೆ ನೀಡಲಾಗಿದೆ ಅನ್ನೋ ಆಕ್ರೋಶ ವ್ಯಕ್ತವಾಗಿತ್ತು. ಎತ್ತುಗಳಿಗೆ ಹಿಂಸಿದವರ ವಿರುದ್ಧ ಕೇಸ್ ದಾಖಲಾಗಿದೆ.

ಎತ್ತುಗಳ ಮಾಲೀಕ ಶರತ, ರಂಜು ಸೇರಿದಂತೆ ಹಲವರ ವಿರುದ್ಧ ಕೆರೆಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜೋಡೆತ್ತುಗಳಿಗೆ 14 ಟನ್ ಗೂ ಅಧಿಕ ತೂಕದ ಕಬ್ಬು ಹೇರಿ ಎಳೆದುಕೊಂಡು ಹೋಗ್ತಿರುವ ವಿಡಿಯೋ ವೈರಲ್ ಆಗಿತ್ತು. ಕೆಲವರು ಎತ್ತುಗಳ ಶಕ್ತಿಗೆ ಬೆರಗಾಗಿದ್ರೆ, ಇನ್ನೂ ಕೆಲವರು ಮೂಕ ಪ್ರಾಣಿಯ ಹಿಂಸೆಗೆ ಆಕ್ರೋಶ ವ್ಯಕ್ತಪಡಿಸಿದ್ರು. ಹೀಗಾಗಿ ಮೂಕ ಪ್ರಾಣಿಗಳ ಹಿಂಸೆ ಕಾಯ್ದೆ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!