ಪ್ರಜಾಸ್ತ್ರ ಸುದ್ದಿ
ವಿಜಯನಗರ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿಧನದಿಂದಾಗಿ ಅವರ ಅಪ್ಪಟ ಅಭಿಮಾನಿಯೊಬ್ಬ ತುಂಗಭದ್ರಾ ಜಲಾಶಯದ ಕೆಳಮಟ್ಟದ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿ ಈ ಘಟನೆ ನಡೆದಿದೆ.
ಕಮ್ಮಾರ ದಿನ್ನಿ ನಿವಾಸಿ ಕಾಳಪ್ಪ ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿಯಾಗಿದ್ದಾನೆ. 60 ವರ್ಷದ ಕಾಳಪ್ಪ ರಾಜ್ ಕುಮಾರ್ ಅವರ ಅಪಟ್ಟ ಅಭಿಮಾನಿಯಾಗಿದ್ದರು. ಅದರಂತೆ ಪುನೀತ್ ಅಭಿಮಾನಿಯೂ ಆಗಿದ್ದರು. ಸಾವಿನ ಸುದ್ದಿಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹನೂರು ತಾಲೂಕಿನ ಮರೂರು ಗ್ರಾಮದಲ್ಲಿ 30 ವರ್ಷದ ಯುವಕನೊಬ್ಬ ಪುನೀತ್ ಸಾವಿನ ಸುದ್ದಿಯಿಂದ ಹೃದಯಾಘಾತಗೊಂಡ ಮೃತಪಟ್ಟಿದ್ದ. ಇನ್ನೊಂದು ಕಡೆ ಅಥಣಿಯಲ್ಲಿ ನೇಣು ಹಾಕಿಕೊಂಡು ಅಭಿಮಾನಿಯೊಬ್ಬ ಮೃತಪಟ್ಟಿದ್ದಾನೆ.