ಪ್ರಜಾಸ್ತ್ರ ಅಪರಾಧ ಸುದ್ದಿ
ಶಿವಮೊಗ್ಗ: ಮಲೆನಾಡಿನಲ್ಲಿ ನಡುರಾತ್ರಿ ಯುವಕನೊಬ್ಬನನ್ನು ಮಚ್ಚು ಲಾಂಗ್ ನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ರಾತ್ರಿ ಸುಮಾರು 11.40ರ ಹೊತ್ತಿನಲ್ಲಿ ನಗರದ ವಾದಿ ಎ ಹುದಾ ಬಡಾವಣೆಯಲ್ಲಿ ಈ ಕೃತ್ಯ ನಡೆದಿದೆ. ಜೈನುದ್ದೀನ್(23) ಕೊಲೆಯಾದ ಯುವಕ.
ಕೊಲೆಯಾದ ಜೈನುದ್ದೀನ್ ಇತ್ತೀಚೆಗಷ್ಟೇ ವಾದಿ ಎ ಹುದಾ ಬಡಾವಣೆಗೆ ಬಂದಿದ್ದ. ಇವನ ವಿರುದ್ಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, ರೌಡಿ ಶೀಟರ್ ಸಹ ಆಗಿದ್ದನಂತೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲ. ತುಂಗಾನಗರ ಪೊಲೀಸರು ಪರಿಶೀಲನೆ ನಡೆಸಿದ್ದು ತನಿಖೆ ನಡೆಸುತ್ತಿದ್ದಾರೆ.