ನಟ ಶ್ರೀಮುರಳಿ ನಟನೆಯ ಭರಾಟೆ ಸಿನ್ಮಾ ಭರ್ಜರಿಯಾಗಿ ಸೌಂಡ್ ಮಾಡ್ತಿದೆ. ರೋರಿಂಗ್ ಸ್ಟಾರ್ ಫ್ಯಾನ್ಸ್ ಗೆ ಏನು ಬೇಕು ಅದೆಲ್ಲವೂ ಚಿತ್ರದಲ್ಲಿದೆ. ಇದರ ನಡುವೆ ನಟ ಶ್ರೀಮುರಳಿ, ನಿರ್ದೇಶಕ ಪ್ರಶಾಂತ ನೀಲ ಜೊತೆ ಮತ್ತೊಂದು ಸಿನ್ಮಾ ಮಾಡಲು ರೆಡಿ ಆಗಿದ್ದಾರಂತೆ.
ಉಗ್ರಂ ಸಿನ್ಮಾದ ಬಳಿಕ ಈ ಜೋಡಿ ಒಟ್ಟಿಗೆ ಕೆಲಸ ಮಾಡಿಲ್ಲ. ಪ್ರಶಾಂತ ನೀಲ ಕೆಜಿಎಫ್ ಸಿನ್ಮಾದಲ್ಲಿ ಫುಲ್ ಬ್ಯುಸಿ. ರೋರಿಂಗ್ ಸ್ಟಾರ್ ಅವರ ಚಿತ್ರಗಳಲ್ಲಿ ಬ್ಯುಸಿ. ಇದರ ನಡುವೆ ಒಂದೊಳ್ಳೆ ಸ್ಕ್ರಿಪ್ಟ್ ಹುಡುಕಾಟದಲ್ಲಿರುವ ಜೋಡಿ ಆದಷ್ಟು ಬೇಗ ಪ್ರೇಕ್ಷಕರ ಮುಂದೆ ಬರ್ತಾರಂತೆ.
ಸೂಪರ್ ಹಿಟ್ ಮಾಸ್ ಚಿತ್ರಗಳನ್ನ ನೀಡಿರುವ ನಿರ್ದೇಶಕ ಪ್ರಶಾಂತ ನೀಲ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಕೆಜಿಎಫ್ ಚಿತ್ರದ ನಂತರ ಅವರ ಇಮೇಜ್ ಇನ್ನೂ ಬದಲಾಗಿದೆ. ಹೀಗಾಗಿ ಉಗ್ರಂ ಜೋಡಿ ಹೊಸ ಪ್ರಾಜೆಕ್ಟ್ ಮಾಡುತ್ತೆ ಅಂದ್ರೆ, ದೊಡ್ಡ ಮಟ್ಟದಲ್ಲಿಯೇ ಇರುತ್ತೆ. ಆದ್ರೆ, ಯಾವುದೇ ಕಾರಣಕ್ಕೂ ಅವಸರ ಮಾಡಬಾರದು ಅಂತಿದ್ದಾರೆ ನಟ ಶ್ರೀಮುರಳಿ.