ಟಾಲಿವುಡ್ ದೊಡ್ಡ ಕುಟುಂಬದ ಕುಡಿ, ನಟ ತಾರಕರತ್ನ ನಿಧನ

187

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬೆಂಗಳೂರು: ತೆಲುಗು ಚಿತ್ರರಂಗದ ಸೂಪರ್ ಸ್ಟಾರ್, ಮಾಜಿ ಸಿಎಂ ದಿವಂಗತ ನಂದಮೂರಿ ತಾರಕ್ ರಾಮರಾವ್ ಅವರ ಮೊಮ್ಮಗ ತಾರಕರತ್ನ(39) ನಿಧನರಾಗಿದ್ದಾರೆ. ಎನ್ ಟಿಆರ್ ಅವರ 12 ಜನ ಮಕ್ಕಳಲ್ಲಿ 5ನೇ ಮಗನಾದ ಮೋಹನಕೃಷ್ಣ ಅವರ ಪುತ್ರ ಈ ತಾರಕರತ್ನ. ಕಳೆದ 22 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರನ್ನು ಸಿಲಿಕಾನ್ ಸಿಟಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

ತಾರಕರತ್ನ ನಿಧನದಿಂದ ನಂದಮೂರಿ ಕುಟುಂಬ ಹಾಗೂ ಟಾಲಿವುಡ್ ಸಿನಿರಂಗ ಶೋಕಸಾಗರದಲ್ಲಿ ಮುಳುಗಿದೆ. ಇವರ ಕುಟುಂಬ ಸಿನಿರಂಗದಲ್ಲಿದೆ. ರಾಜಕೀಯದಲ್ಲಿಯೂ ಛಾಪು ಮೂಡಿಸಿದೆ. 2002ರಲ್ಲಿ ಒಕಟೊ ನಂ ಕುರ್ರೋಡು ಚಿತ್ರದ ಮೂಲಕ ತಾರಕರತ್ನ ಸಿನಿರಂಗ ಪ್ರವೇಶಿಸಿದರು. ಸುಮಾರು 21 ಚಿತ್ರಗಳಲ್ಲಿ ನಟಿಸಿದ್ದಾರೆ.

2012ರಲ್ಲಿ ಕುಟುಂಬದಿಂದ ದೂರಾದರು. ಪ್ರೀತಿಸಿದ ಹುಡುಗಿಯನ್ನು ಎರಡು ಕುಟುಂಬದ ವಿರೋಧದ ನಡುವೆ ಮದುವೆಯಾಗಿದ್ದರು. ಹೌದು, ಕಾಮನ್ ಫ್ರೆಂಡ್ ಮೂಲಕ ಪರಿಚಯವಾದ ಅಲೇಖ್ಯಾ ರೆಡ್ಡಿ ಮೊದಲ ಪತಿಯಿಂದ ಡಿವೋರ್ಸ್ ಪಡೆದಿದ್ದರು. ಈ ಕಾರಣಕ್ಕೆ ನಂದಮೂರಿ ಫ್ಯಾಮಿಲಿ ಮದುವೆಗೆ ಒಪ್ಪಿರಲಿಲ್ಲ. ಅಲೇಖ್ಯಾ ಕುಟುಂಬದವರು ಸಮ್ಮಿತಿಸಿರಲಿಲ್ಲ. ಆದರೂ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ನಂತರ ಕುಟುಂಬದಿಂದ ದೂರವಾದರು.

ಸೂಪರ್ ಸ್ಟಾರ್ ನಟರಾದ ನಂದಮೂರಿ ಬಾಲಯ್ಯನಿಗೆ ಅಣ್ಣನ ಮಗ, ಜ್ಯೂ.ಎನ್ ಟಿಆರ್ ಗೆ ಚಿಕ್ಕಪನ ಮಗ. ತಾರಕರತ್ನ ಆಸ್ಪತ್ರೆಗೆ ದಾಖಲಾದ ದಿನದಿಂದ ನಂದಮೂರಿ ಸಾಕಷ್ಟು ಕಾಳಜಿವಹಿಸಿದ್ದರು. ಆತನ ಜೊತೆಗೆ ಇದ್ದರು. ಈಗ ನೋಡಿದರೂ ಅವರೆಲ್ಲರ ಕೋರಿಕೆ ವಿಫಲವಾಗಿದೆ. ತಾರಕರತ್ನ-ಅಲೇಖ್ಯಾ ಜೋಡಿಗೆ ಒಂದು ಹೆಣ್ಣು ಮಗುವಿದೆ.

ಜನವರಿ 27ರಂದು ಆಂಧ್ರದ ಕುಪ್ಪಂನಲ್ಲಿ ಟಿಡಿಪಿ ಪಕ್ಷದ ನಾಯಕ ನರಾ ಲೋಕೇಶ್ ನೇತೃತ್ವದಲ್ಲಿ ಯುವಗಲಂ ಪಾದಯಾತ್ರೆ ನಡೆಯುತ್ತಿತ್ತು. ಇದರಲ್ಲಿ ಭಾಗವಹಿಸಿದ್ದ ತಾರಕರತ್ನ ಹೆಜ್ಜೆ ಹಾಕುತ್ತಿರುವಾಗಲೇ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅವರಿಗೆ ಹೃದಯಾಘಾತವಾಗಿದ್ದು, ಹೃದಯದ ಎಡಭಾಗದಲ್ಲಿ ಶೇಕಡ 90ರಷ್ಟು ಬ್ಲಾಕ್ ಆಗಿದೆ ಎಂದು ತಿಳಿದು ಬಂತು. ಕೂಡಲೇ ಅವರನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಲಾಗಿತ್ತು. ಚಿಕಿತ್ಸೆ ಫಲಿಸಿದೆ ಶನಿವಾರ ರಾತ್ರಿ ನಿಧನರಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!