ನನ್ನ ಮಕ್ಕಳು ಜಿಹಾದಿಗಳು ಆಗಲ್ಲ: ನಟಿ ಪ್ರಿಯಾಮಣಿ

204

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟಿ ಪ್ರಿಯಾಮಣಿ ಬಹುಭಾಷಾ ತಾರೆ. ಕನ್ನಡ, ತಮಿಳು, ತೆಲುಗು, ಮಲಿಯಾಳಂ, ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ್ಲೂ ಸಹ ಅವರ ಕೈಯಲ್ಲಿ ಕನ್ನಡ, ತಮಿಳು, ಹಿಂದಿ ಚಿತ್ರಗಳಿವೆ. ಇಂತಹ ನಟಿ 2017ರಲ್ಲಿ ಉದ್ಯಮಿ ಮುಸ್ತಫಾ ರಾಜ್ ಅವರೊಂದಿಗೆ ಮದುವೆಯಾದರು. ಅಲ್ಲಿಂದ ಇಲ್ಲಿಯ ತನಕ ಟ್ರೋಲ್ ಆಗ್ತಾನೆ ಇದ್ದಾರೆ.

ಸಿನಿಮಾ ತಾರೆಯರು ಅನ್ಯ ಧರ್ಮಿಯರ ಜೊತೆಗೆ ಮದುವೆಯಾಗುವುದು ಹೊಸದೇನಲ್ಲ. ತಮಿಳು ಮೂಲದ ಅಯ್ಯರ್ ಕುಟುಂಬದ ನಟಿ ಪ್ರಿಯಾಮಣಿ ವಾಸದೇವ್ ಮಣಿ ಅಯ್ಯರ್, ಮುಸ್ಲಿಂ ಸಮುದಾಯದ ಮುಸ್ತಾಫಾ ರಾಜ್ ಜೊತೆಗೆ ಮದುವೆಯಾದರು. ಅಲ್ಲಿಂದ ಅವರ ವಿರುದ್ಧ ಅನೇಕ ಆಕ್ರೋಶ ವ್ಯಕ್ತಪಡಿಸಲಾಯಿತು. ಮಧ್ಯ ಡಿವೋರ್ಸ್ ಪಡೆಯುತ್ತಿದ್ದಾರೆ ಅಂತಾನೂ ಸುದ್ದಿಯಾಯಿತು.

ಅನ್ಯ ಧರ್ಮದವನ ಜೊತೆಗೆ ಮದುವೆ ಮಾಡಿಕೊಂಡಿದ್ದೀಯಾ, ನಿನ್ನ ಮಕ್ಕಳು ಜಿಹಾದಿಗಳು ಆಗುತ್ತಾರೆ, ಲವ್ ಜಿಹಾದ್ ಅಂತೆಲ್ಲ ಮಾತನಾಡುತ್ತಲೇ ಇರುತ್ತಾರೆ. ಈ ಕುರಿತು ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ಪ್ರಿಯಾಮಣಿ, ನನ್ನ ಮಕ್ಕಳು ಜಿಹಾದಿಗಳು ಆಗಲ್ಲ. ಎಲ್ಲ ಮುಸ್ಲಿಂರು ಐಸಿಸ್ ಅಲ್ಲ. ಪ್ರೀತಿಸಿದವರನ್ನು ಮದುವೆಯಾದರೆ ತಪ್ಪಾ ಅಂತೆಲ್ಲ ಪ್ರಶ್ನಿಸುವ ಮೂಲಕ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

ಹಿಂದು, ಮುಸ್ಲಿಂ, ಸಿಖ್ಖರು ಭಾಯಿ ಭಾಯಿ ಅಂತಾ ಯಾಕೆ ಹೇಳುತ್ತಾರೆ. ಕೆಲವರು ನೀನು ಹಿಂದೂ ಅಂತಾರೆ. ಕೆಲವರು ಮುಸ್ಲಿಂ ಅಂತಾರೆ. ಇದು ನನ್ನ ಬದುಕು. ನಾನು ಯಾರೊಟ್ಟಿಗೆ ಜೀವನ ಮಾಡಬೇಕು ಅವರೊಟ್ಟಿಗೆ ಮಾಡುತ್ತೇನೆ. ಇದನ್ನು ನೀನು ಒಪ್ಪಿಕೊಳ್ಳಬೇಕು ಅಂತಾ ನಾನು ಹೇಳಿಲ್ಲ ಎನ್ನುವ ಮೂಲಕ ತಮ್ಮ ಮದುವೆ ವಿರುದ್ಧ ಮಾತನಾಡುವವರ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ.




Leave a Reply

Your email address will not be published. Required fields are marked *

error: Content is protected !!