ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ನಡುವೆ ಬಂಡಾಯ ಸ್ಫೋಟಗೊಂಡಿದೆ. ಇದ್ರಿಂದಾಗಿ ಎಡಿಜಿಪಿ ರವಿಂದ್ರನಾಥ ರಾಜೀನಾಮೆ ಸಲ್ಲಿಸಿದ್ದಾರೆ. ಇವರಿಗಿಂತ ಕಿರಿಯರಾಗಿರುವ ಸುನೀಲಕುಮಾರ ಅವರಿಗೆ ಬಡ್ತಿ ನೀಡಲಾಗಿದೆ. ಇದ್ರಿಂದ ಸಿಟ್ಟಾದ ಎಡಿಜಿಪಿ ರವೀಂದ್ರನಾಥ ರಾಜೀನಾಮೆ ಸಲ್ಲಿಸಿದ್ದಾರೆ.
ರಾಜ್ಯ ಸರ್ಕಾರ ನನ್ನ ಮನವಿಯನ್ನ ಪುರಸ್ಕರಿಸಿಲ್ಲ. ಅಸಂವಿಧಾನಿಕವಾಗಿ ನಡೆದುಕೊಂಡಿದ್ದು, ನನ್ಗಿಂತ ಜೂನಿಯರ್ ಇರುವ ಸುನೀಲಕುಮಾರಗೆ ಬಡ್ತಿ ನೀಡಲಾಗಿದೆ. ಇದು ನನೊಬ್ಬನ ಹೋರಾಟವಲ್ಲ. ಎಲ್ಲ ಪೊಲೀಸ್ ಅಧಿಕಾರಿಗಳ ಹೋರಾಟವೆಂದು ಹೇಳಿದ್ದಾರೆ.