‘ಲೋನ್ ಲೇಡಿ’ಯ ಮತ್ತೊಂದು ವಂಚನೆ ಪ್ರಕರಣ

233

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ರಾಷ್ಟ್ರೀಯ ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿಕೊಂಡು ಬಂದು ನಟ ದರ್ಶನ ಹೆಸರಿನಲ್ಲಿ 25 ಕೋಟಿ ರೂಪಾಯಿ ವಂಚನೆ ಮಾಡಲು ಯತ್ನಿಸಿದ್ದ ಅರುಣಾಕುಮಾರಿ ಅನ್ನೋ ಮಹಿಳೆ ವಿರುದ್ಧ, ಇದೀಗ ಮತ್ತೊಬ್ಬರು ಆರೋಪ ಮಾಡಿದ್ದಾರೆ. ಚಿತ್ರಸಾಹಿತಿ ನಾಗೇಂದ್ರ ಪ್ರಸಾದ ಅವರ ಸ್ನೇಹಿತ ನಾಗವರ್ಧನ ಅವರಿಗೂ ಮೋಸ ಮಾಡಿದ್ದಾಳಂತೆ.

2015ರಲ್ಲಿ ಸಿನಿಮಾ ಮಾಡುವುದಾಗಿ ಬಂದು ಪರಿಚಯ ಮಾಡಿಕೊಂಡಿದ್ರು. ನನಗೆ ಆಫರ್ ಕೊಡಿಸುತ್ತೇನೆ ಎಂದಿದ್ರು. ನಾನು ನಂಬಿದ್ದೆ. ಬಳಿಕ ಕನಕಪುರ ರಸ್ತೆಯಲ್ಲಿ ಪ್ರಾಪರ್ಟಿ ಕೊಡಿಸುವುದಾಗಿ ಹೇಳಿದ್ರು. ಅದಕ್ಕೆ 10-15 ಕೋಟಿ ರೂಪಾಯಿ ಎಂದಿದ್ರು. ಬಳಿಕ ಫ್ಯಾಮಿಲಿ ವಿಚಾರ ತಂದರು. ನಮ್ಗೆ ಪರಿಚಯವಾಗಿದ್ದು ನಂದಿನಿ ಅನ್ನೋ ಹೆಸರಿನಲ್ಲಿ. ಇವಳಿಂದ ನಾನು 35 ಲಕ್ಷ ರೂಪಾಯಿ ಕಳೆದುಕೊಂಡಿದ್ದೇನೆ ಎಂದು ನಾಗರ್ವಧನ ಆರೋಪಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!