ಎಪಿಎಂಸಿ, ಭೂ ಸುಧಾರಣೆ ಕಾಯ್ದೆ ಮಂಡನೆ: ಧ್ವನಿ ಮತಕ್ಕೆ ಮುಂದಾದ ಕಾಂಗ್ರೆಸ್

266

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಎಪಿಎಂಸಿ ಹಾಗೂ ಭೂ ಸುಧಾರಣೆ ತಿದ್ದುಪಡಿ ಮಸೂದೆಯನ್ನ ಇಂದು ಸದನದಲ್ಲಿ ಮಂಡನೆಯಾಗಲಿದೆ. ಈ ಸಂಬಂಧ ಕಾಂಗ್ರೆಸ್ ತನ್ನ ಶಾಸಕರಿಗೆ ವಿಪ್ ಜಾರಿಗೊಳಿಸಿದೆ. ಅಲ್ದೇ, ಮತ ಹಾಕುವ ಬದ್ಲು ಧ್ವನಿ ಮತಕ್ಕೆ ಒಪ್ಪಿಗೆ ನೀಡಿದೆ.

ಅವಿಶ್ವಾಸ ನಿರ್ಣಯ ಮಂಡನೆ ಸಂಬಂಧ ಸ್ಪೀಕರ್ ಬಳಿ ಧ್ವನಿಮತಕ್ಕೆ ಹಾಕಲು ಮನವಿ ಮಾಡಿದ್ರು. ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಸಹ ಸ್ಪೀಕರ್ ಬಳಿ ಮನವಿ ಮಾಡಿದ್ರು. ಕಡ್ಡಾಯ ಮಾಡುವುದಾದ್ರೆ ಪಿಪಿಇ ಕಿಟ್ ಹಾಕಿಕೊಂಡು ಬರಬೇಕಾಗುತ್ತೆ. ಇದಕ್ಕೆ ವಿರೋಧ ಪಕ್ಷದ ಸಹಕಾರ ಬೇಕು. ನಾವು ಸಿದ್ಧ ಎಂದರು.

ಎರಡೂ ಕಡೆಯ ಶಾಸಕರಿಗೆ ಸೋಂಕು ತಗುಲಿದೆ. ನಮ್ಗೂ ಜವಾಬ್ದಾರಿಯಿದೆ. ಅವಿಶ್ವಾಸ ನಿರ್ಣಯ ಮಂಡನೆ ಮತಕ್ಕೆ ಹಾಕಿಯಂತೆ ಸಾಮಾನ್ಯವಾಗಿ ಬೇಡಿಕೆ ಇಡುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಆದ್ರೆ, ಇದನ್ನ ಧ್ವನಿ ಮತದ ಮೂಲಕ ಮಾಡಲು ಹೇಳಿದ್ದೇವೆ ಎಂದರು. ಹೀಗಾಗಿ ಎಪಿಎಂಸಿ ಹಾಗೂ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಮಂಡನೆಯಾಗುತ್ತಾ ಇಲ್ವಾ ಅನ್ನೋದು ಸಧ್ಯದಲ್ಲಿಯೇ ತಿಳಿಯಲಿದೆ.




Leave a Reply

Your email address will not be published. Required fields are marked *

error: Content is protected !!