ಪ್ರಜಾಸ್ತ್ರ ಕ್ರೀಡಾ ಸುದ್ದಿ
ಈ ಬಾರಿ ಐಪಿಎಲ್ ಟಿ-20 ಪಂದ್ಯಲ್ಲಿ ಚೆನ್ನೈ ಆಡಿರುವ 3 ಪಂದ್ಯಗಳಲ್ಲಿ 2ರಲ್ಲಿ ಸೋತಿದೆ. 1ರಲ್ಲಿ ಗೆದ್ದಿದೆ. ಗೆಲ್ಲುವ ಪಂದ್ಯಗಳನ್ನ ಸಹ ಸೋಲುತ್ತಿರುವುದಕ್ಕೆ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್, ಚೆನ್ನೈ ಆಟಗಾರರು ಮುಂದಿನ ಪಂದ್ಯಕ್ಕೆ ಗ್ಲುಕೋಸ್ ಕುಡಿದು ಬರಲಿ ಎಂದು ಹೇಳುವ ಮೂಲಕ ಕಾಲೆಳೆದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸೆಹ್ವಾಗ್, ಗ್ಲುಕೋಸ್ ಕುಡಿದು ಬನ್ನಿ ಎಂದು ಕಿಂಡಲ್ ಮಾಡಿದ್ದಾರೆ. ಮುಂಬೈ ವಿರುದ್ಧ ಮೊದಲ ಪಂದ್ಯ ಗೆದ್ದ ಧೋನಿ ಪಡೆ, ರಾಜಸ್ಥಾನ ರಾಯಲ್ಸ್, ಡೆಲ್ಲಿ ಕಾಪಿಟಲ್ಸ್ ವಿರುದ್ಧ ಸೋಲು ಅನುಭವಿಸಿತು. ಈ ಎರಡು ಪಂದ್ಯಗಳಲ್ಲಿ ಟಾಸ್ ಗೆದ್ದ ಬೌಲಿಂಗ್ ಆಯ್ಕೆ ಮಾಡಿಕೊಂಡ ಧೋನಿ ಲೆಕ್ಕಾಚಾರ ಉಲ್ಟಾ ಆಗಿ ಹೋಗಿದೆ.