ಪ್ರಜಾಸ್ತ್ರ ವರದಿ
ಬೆಂಗಳೂರು: ಕಳೆದ ಮಧ್ಯರಾತ್ರಿ ಇಂದು ಬೆಳಗ್ಗೆ ಸೇರಿದಂತೆ ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿದೇಶದಿಂದ 656 ಜನರು ಬಂದಿದ್ದಾರೆ. ಜಕಾರ್ತ್, ಮಾಲೆ, ದೋಹಾ, ಕೌಲಾಲಂಪುರನಿಂದ ಅನಿವಾಸಿ ಭಾರತೀಯರು ಆಗಮಿಸಿದ್ದಾರೆ.
ಇಂಡೋನೇಷಿಯಾದ ಜಕಾರ್ತನಿಂದ 214, ಕತಾರನ ದೋಹಾದಿಂದ 182, ಮಾಲ್ಡೀವಸ್ ನ ಮಾಲೆಯಿಂದ 152, ಕೌಲಾಲಂಪುರದಿಂದ 108 ಮಂದಿ ಬಂದಿದ್ದಾರೆ ಎಂದು ಗ್ರಾಮಾಂತರ ವಿಭಾಗದ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ತಿಳಿಸಿದ್ದಾರೆ.
ಮಾಲೆಯಿಂದ ಬಂದ 152 ಜನ ಪ್ರಯಾಣಿಕರಲ್ಲಿ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅವರನ್ನ ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದಂತೆ ಎಲ್ಲರನ್ನ ಹೋಟೆಲ್ ಗಳಲ್ಲಿ 14 ದಿನ ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.