ಪ್ರಜಾಸ್ತ್ರ ಸಿನಿಮಾ ಡೆಸ್ಕ್
ರಾಜ್ಯ ಸರ್ಕಾರದ ವತಿಯಿಂದ ನಿರ್ಮಿಸಲಾದ ಕರೋನಾ ಜಾಗೃತಿ ಹಾಡವೊಂದನ್ನ ನಿರ್ದೇಶಕ ಯೋಗರಾಜ ಭಟ ಆ್ಯಕ್ಷನ್ ಕಟ್ ಹೇಳಿದ್ರು. ರಾಜಕಾರಣಿಗಳಿಂದ ಹಿಡಿದು ಕರೋನಾ ವಾರಿಯರ್ಸ್ ವ್ಯಾಪ್ತಿಯಲ್ಲಿ ಬರುವ ವೈದ್ಯರು, ನರ್ಸ್, ಪೊಲೀಸರು, ಪತ್ರಕರ್ತರು, ಪೌರಕಾರ್ಮಿಕರು ಸೇರಿದಂತೆ ಎಲ್ಲರನ್ನ ಬಳಿಸಿಕೊಂಡಿದ್ರು.
ಇದೀಗ ಬದಲಾಗು ನೀನು ಬದಲಾಯಿಸು ನೀನು ಅನ್ನೋ ಟೈಟಲ್ ಮೂಲಕ ಮತ್ತೊಂದು ಕರೋನಾ ಜಾಗೃತಿ ಹಾಡು ಮೂಡಿ ಬಂದಿದೆ. ಸ್ಯಾಂಡಲ್ ವುಡ್ ಅಂಗಳದ ಸ್ಟಾರ್ ನಟ, ನಟಿಯರು, ಕ್ರೀಡಾ ತಾರೆಯರು ಈ ಸಾಂಗ್ ಗೆ ದನಿಯಾಗಿದ್ದಾರೆ. ಈ ಬಗ್ಗೆ ಎಲ್ಲರೂ ತಮ್ಮ ಟ್ವೀಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಕಾನ್ಸೆಪ್ಟ್ ಹಾಗೂ ಡೈರೆಕ್ಷನ್ ಪವನ ಒಡೆಯರ, ಸಂಗೀತ ವಿ.ಹರಿಕೃಷ್ಣ ನೀಡಿರುವ ‘ಈ ಸುವರ್ಣಾವಕಾಶ ಕಳೆದುಕೊಳ್ಳಬೇಡಿ. ಬದಲಾದರೆ ಜೀವನ ಶೈಲಿ. ನಾಳೆಗಳು ಇದೆ ನಮ್ಮ ಕೈಯಲ್ಲಿ’ ಅನ್ನೋ ಸಾಲುಗಳನ್ನ ಹೊಂದಿರುವ ಸಾಂಗ್, ಸೋಮವಾರ ಸಂಜೆ 5ಗಂಟೆ ರಿಲೀಸ್ ಆಗ್ತಿದೆ. ಕರೋನಾ ವಿರುದ್ಧ ದನಿಗೂಡಿಸಿದ ನಮ್ಮೂರಿನ ತಾರೆಯರು ಅನ್ನೋ ಅಡಿಬರಹದೊಂದಿಗೆ ಸೋಮವಾರ ಈ ಸಾಂಗ್ ರಿಲೀಸ್ ಆಗ್ತಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ.