ಪ್ರಜಾಸ್ತ್ರ ಸುದ್ದಿ
ಅಥಣಿ: ತಾಲೂಕಿನ ಅನಂತಪುರ ಹೋಬಳಿಯ ನಾಗನೂರು ಪಿ.ಎ ಗ್ರಾಮದ ಅರ್ಹ ಫಲಾನುಭಿಗಳಿಗೆ ಮಾಶಾಸನ ಆದೇಶ ಪ್ರತಿಗಳನ್ನು ನೀಡಲಾಗಿದೆ. ಉಪ ವಿಭಾಗಾಧಿಕಾರಿ ಚಿಕ್ಕೋಡಿ ಇವರ ನಿರ್ದೇಶನದ ಮೇರೆಗೆ ತಹಶೀಲ್ದಾರ್ ಬಿ.ಬಿ ಮ್ಯಾಗೇರಿ ಆದೇಶ ಪ್ರತಿ ವಿತರಿಸಿದರು.
ಈ ವೇಳೆ ಮಾತನಾಡಿದ ಅವರು, ಸರ್ಕಾರದ ಆದೇಶದಂತೆ ಮನೆ ಮನೆಗೆ ಹೋಗಿ ಫಲಾನುಭವಿಗಳನ್ನು ಹುಡುಕಿ ಅವರಿಗೆ ಸ್ಥಳದಲ್ಲಿ ಮಾಶಾಸನದ ಆದೇಶ ಪ್ರತಿ ವಿತರಿಸಲಾಗಿದೆ. ಇದರಿಂದಾಗಿ ಸಾರ್ವಜನಿಕರಿಗೆ ಉಪಯೋಗವಾಗಿದೆ ಎಂದು ಉಪ ತಹಶೀಲ್ದಾರ್ ಬಿ.ಬಿ ಮ್ಯಾಗೇರಿ ಹೇಳಿದರು.
ಈ ವೇಳೆ ಪಾರ್ಥನಹಳ್ಳಿ, ಕಿರಣಗಿ, ನಾಗನೂರ ಪಿ.ಎ ಗ್ರಾಮಗಳ ಗ್ರಾಮ-ಒನ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.