ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಜ್ಯೋತಿಷಿಯೊಬ್ಬರ ಪಿಎಯಿಂದಲೇ ಅವರ ಮನೆಯನ್ನೇ ದರೋಡೆ ಮಾಡಲಾಗಿದೆ. ಕೆಂಗೇರಿ ಪೊಲೀಸರು ಮಹಿಳಾ ಪಿಎ ಹಾಗೂ ಆಕೆಯ ಗ್ಯಾಂಗ್ ಬಂಧಿಸಿದ್ದಾರೆ. ಜ್ಯೋತಿಷಿ ಪ್ರಮೋದ ಎಂಬುವರ ಮನೆಯನ್ನು ಅವರ ಪಿಎ ಮೇಘನಾ ಹಾಗೂ ಆಕೆ ತಂಡ ದರೋಡೆ ಮಾಡಿದೆ. ತಮಿಳುನಾಡಿನ ಸೇಲಂನಲ್ಲಿ ಅವರನ್ನು ಬಂಧಿಸಲಾಗಿದೆ.
ತಮಿಳುನಾಡು ಮೂಲದ ಮೇಘನಾ, ಜ್ಯೋತಿಷಿ ಪ್ರಮೋದ್ ಹತ್ತಿರ ಕೆಲಸ ಮಾಡುತ್ತಿದ್ದಳು. ಒಮ್ಮೆ ಸಾಲ ಕೇಳಿದ್ದಳು. ಆದರೆ, ಸಾಲ ಕೊಡುವುದಕ್ಕೆ ಜ್ಯೋತಿಷಿ ಪ್ರಮೋದ್ ನಿರಾಕರಿಸಿದ್ದ. ಹೀಗಾಗಿ ಮೂವರಿಗೆ ಮನೆ ದರೋಡೆಗೆ ಸುಪಾರಿ ಕೊಟ್ಟದ್ದಳು. ಅದರಂತೆ ಜ್ಯೋತಿಷಿ, ಮೇಘನಾ ಮನೆಯಲ್ಲಿ ಇರುವಾಗಲೇ ಮೂವರು ಎಂಟ್ರಿ ಕೊಟ್ಟಿದ್ದರು.
ಜ್ಯೋತಿಷ್ಯ ಕೇಳುವ ನೆಪದಲ್ಲಿ ಮನೆಗೆ ಬಂದಿದ್ದ ಮೂವರು ಪ್ರಮೋದನನ್ನು ಕಟ್ಟಿ ಹಾಕಿ 250 ಗ್ರಾಂ ಚಿನ್ನಾಭರಣ, 5 ಲಕ್ಷ ರೂಪಾಯಿ ನಗದು ದೋಚಿ ಎಸ್ಕೇಪ್ ಆಗಿದ್ದರು. ಘಟನೆ ಬಳಿಕ ಮೇಘನಾ ಸಹ ತಮಿಳುನಾಡಿಗೆ ಹೋಗಿದ್ದಳು. ಅನುಮಾನ ಬಂದು ಪೊಲೀಸರು ತನಿಖೆ ನಡೆಸಿದಾಗ ಮನೆ ದರೋಡೆ ಹಿಂದೆ ಜ್ಯೋತಿಷಿ ಪಿಎ ಇರುವುದು ತಿಳಿದು ಬಂದು ಬಂಧಿಸಲಾಗಿದೆ.