ಪ್ರಜಾಸ್ತ್ರ ಅಪರಾಧ ಸುದ್ದಿ
ಕೊಪ್ಪಳ: ನಗರದ ಕಿನ್ನಾಳ ರಸ್ತೆಯಲ್ಲಿರುವ ಮನೆಯೊಂದರಲ್ಲಿ ಭಾನುವಾರ ರಾತ್ರಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ವೆಂಕಟೇಶ್ ರಾಯ್ಕರ್ ಎಂಬುವರ ಮನೆಯಲ್ಲಿ ದರೋಡೆ ಮಾಡಿದ್ದು, ಬರೋಬ್ಬರಿ ಅರ್ಧ ಕೆಜಿಗೂ ಹೆಚ್ಚಿನ ಚಿನ್ನಾಭರಣ, 4 ಕೆಜಿಗೂ ಹೆಚ್ಚಿನ ಬೆಳ್ಳಿ ಕಳ್ಳತನವಾಗಿದೆ.
ಮನೆಯವರು ಊರಿಗೆ ಹೋಗಿದ್ದ ವೇಳೆ ಕಳ್ಳತನ ನಡೆದಿದೆ. ವೆಂಕಟೇಶ್ ಅವರು ಇತ್ತೀಚೆಗೆ ಚಿನ್ನಾಭರಣ ಅಂಗಡಿ ಪ್ರಾರಂಭಿಸಿದ್ದರು. ಅಂಗಡಿಯಲ್ಲಿ ಲಾಕರ್ ಇಲ್ಲದ ಕಾರಣ ಮನೆಯಲ್ಲಿ ಇಟ್ಟಿದ್ದ ಚಿನ್ನಾಭರಣ, ಬೆಳ್ಳಿ, 50 ಸಾವಿರ ನಗದು ದರೋಡೆ ಮಾಡಲಾಗಿದೆ. ಇದರ ಜೊತೆಗೆ ಇನ್ನೊಂದು ಮನೆ ಕಳ್ಳತನವಾಗಿದೆ.