ಬೆಳಗಾವಿ ಘಟನೆ: ಗ್ರಾಮಸ್ಥರಿಗೆಲ್ಲ ಶಿಕ್ಷೆಗೆ ಹೈಕೋರ್ಟ್ ಅಭಿಪ್ರಾಯ

197

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಬೆಳಗಾವಿ ತಾಲೂಕಿನ ಹೊಸ ವಂಟನೂರ ಗ್ರಾಮದಲ್ಲಿ ಮಹಿಳೆಯೊಬ್ಬರನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ ಘಟನೆ ಸಂಬಂಧ, ಹೈಕೋರ್ಟ್ ತರಾಟೆಗೆ ತೆಗೆದುಕೊಳ್ಳುತ್ತಿದೆ. ಅಮಾನವೀಯ ಕೃತ್ಯ ತಡೆಯದ ಇಡೀ ಗ್ರಾಮಸ್ಥರಿಗೆ ಶಿಕ್ಷೆ/ದಂಡ ವಿಧಿಸುವ ಯೋಜನೆ ರೂಪಿಸುವಂತೆ ಅಭಿಪ್ರಾಯ ಪಟ್ಟಿದೆ.

ಈ ಪ್ರಕರಣದಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿರುವ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಪ್ರಸನ್ ಬಾಲಚಂದ್ರ ವರಾಳೆ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರ ಪೀಠ, ಗ್ರಾಮದಲ್ಲಿ ಅಮಾನೀಯ ಕೃತ್ಯ ನಡೆಯುತ್ತಿದ್ದರೂ ತಡೆಯದ ಇಡೀ ಗ್ರಾಮಸ್ಥರಿಗೆ ಶಿಕ್ಷೆ ಅಥವ ದಂಡ ವಿಧಿಸಬಹುದಾದ ಯೋಜನೆ ರೂಪಿಸಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬ್ರಿಟಿಷರ ಕಾಲದಲ್ಲಿ ಮಿಲಿಯಂ ಬೆಂಟಿಂಕ್, ಕಳ್ಳತನ ಮಾಡುವವರಿದ್ದ ಗ್ರಾಮಕ್ಕೆ ವಿಭಿನ್ನ ರೀತಿಯ ತೆರಿಗೆ ವಿಧಿಸುತ್ತಿದ್ದರು. ಇದೇ ರೀತಿ ಗ್ರಾಮಗಳಲ್ಲಿ ತೆರಿಗೆ ವಿಧಿಸಿದರೆ ಸ್ವಲ್ಪ ಜವಾಬ್ದಾರಿ ಬರುತ್ತೆ ಎನ್ನುವ ಮೂಲಕ, ಒಂದು ಹೆಣ್ಮಗಳ ಮೇಲೆ ಕ್ರೌರ್ಯ ನಡೆಯುತ್ತಿದ್ದರೂ ಸುಮ್ಮನಿದ್ದ ಗ್ರಾಮಸ್ಥರ ನಡೆಗೆ ಚಾಟಿ ಏಟು ಬೀಸಲಾಗಿದೆ.




Leave a Reply

Your email address will not be published. Required fields are marked *

error: Content is protected !!