ನವದೆಹಲಿ: ಮಹಾರಾಷ್ಟ್ರದ ಔರಂಗಬಾದ್ ನಲ್ಲಿ ನಡೆದ ರೈಲು ದುರಂತದಲ್ಲಿ 14 ಮಂದಿ ಸಾವನ್ನಪ್ಪಿದ್ದು, 5 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.
ಟ್ವೀಟ್ ಮೂಲಕ ಸಂತಾಪ ಸೂಚಿರುವ ಮೋದಿ, ಔರಂಗಬಾದ್ ನಲ್ಲಿ ರೈಲು ದುರ್ಘಟನೆಯಿಂದ ತೀವ್ರ ಹಾನಿಯಾಗಿದೆ. ನಾನು ರೈಲ್ವೆ ಮಂತ್ರಿ ಪಿಯೂಶ ಗೋಯಲ್ ಜೊತೆ ಮಾತ್ನಾಡಿ ಪರಿಸ್ಥಿತಿಯ ಬಗ್ಗೆ ಸೂಕ್ಷ್ಮವಾಗಿ ಗಮನಿಸಿ, ಅಗತ್ಯ ನೆರವು ನೀಡಿಯೆಂದು ಹೇಳುತ್ತೇನೆ ಎಂದಿದ್ದಾರೆ.