ಪ್ರಜಾಸ್ತ್ರ ಕ್ರೀಡಾ ಸುದ್ದಿ
ನವದೆಹಲಿ: ಕರೋನಾ ಮಹಾಮಾರಿಯಿಂದಾಯಿ ಎಲ್ಲವೂ ಬಂದ್ ಆಗಿದೆ. ಈ ಬಾರಿಯ ಐಪಿಎಲ್ ಸಹ ಅರ್ಧಕ್ಕೆ ನಿಂತಿದೆ. ಹೀಗಾಗಿ ಕ್ರಿಕೆಟ್ ಪ್ರೇಮಿಗಳಿಗೆ ನಿರಾಸೆಯಾಗಿದೆ. ಇದರ ನಡುವೆ ಬಿಸಿಸಿಐ ಸಿಹಿ ಸುದ್ದಿ ನೀಡಿದ್ದು, ಭಾರತ ಹಾಗೂ ಶ್ರೀಲಂಕಾ ನಡುವೆ ಜುಲೈನಲ್ಲಿ ಕ್ರಿಕೆಟ್ ಪಂದ್ಯ ನಡೆಯಲಿದೆ.
ಜುಲೈ 13, 16, 19ರಂದು ಏಕದಿನ ಪಂದ್ಯ ನಡೆಯಲಿದೆ. ಜುಲೈ 22ರಿಂದ 5 ಟಿ-20 ಪಂದ್ಯಗಳು ನಡೆಯಲಿವೆ. ಹೀಗಾಗಿ ಜುಲೈ 5ಕ್ಕೆ ಶ್ರೀಲಂಕಕ್ಕೆ ತೆರಳುವ ಭಾರತ ತಂಡ ಸರಣಿ ಮುಗಿಸಿಕೊಂಡು 28ಕ್ಕೆ ವಾಪಸ್ ಆಗಲಿದೆ. ಬಳಿಕ 8 ದಿನಗಳ ಕಾಲ ಕ್ವಾರಂಟೈನ್ ಆಗಲಿದ್ದಾರೆ. ಇನ್ನು ರಾಹುಲ ದ್ರಾವಿಡ್ ಟೀಂನ ಮುಖ್ಯ ತರಬೇತುದಾರರಾಗಿರಲಿದ್ದಾರೆ.