ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ ನಟನೆಯ ಆಯುಷ್ಮಾನ್ ಭವ ಸಿನಿಮಾ ನವೆಂಬರ್ 15ರಂದು ರಿಲೀಸ್ ಆಗ್ತಿದೆ. ಇದಕ್ಕಾಗಿ ಭರ್ಜರಿ ಸಿದ್ಧತೆ ನಡೆದಿದೆ. ಇದರ ನಡುವೆ ಇಂದು ಸಂಜೆ 5 ಗಂಟೆಗೆ ಸಾಂಗ್ ವೊಂದು ರಿಲೀಸ್ ಆಗ್ತಿದೆ.
ಮ್ಯೂಸಿಕ್ ಕಂಪೋಸರ್ ಗುರು ಕಿರಣಗೆ ಇದು 100ನೇ ಸಿನ್ಮಾ. ಈ ಸ್ಪೆಷಲ್ ಸಿನ್ಮಾಗೆ ಮ್ಯೂಸಿಕ್ ಕಂಪೋಸ್ ಮಾಡಿರುವ ಗುರು ಕಿರಣ ಹಾಡಿನ ಮೊದಲು ಸಾಲಿನಲ್ಲಿ ತುಳು ಮಿಕ್ಸ್ ಮಾಡಿದ್ದಾರೆ. ಯಾಕಂದ್ರೆ, ಗುರು ಕಿರಣ ಅವರಿಗೆ ತುಳು ಅವರ ನೆಲದ ಭಾಷೆ. ಹೀಗಾಗಿ ಹಾಡಿನ ಆರಂಭದಲ್ಲಿ ತುಳು ಸಾಲುಗಳಿವೆ.
ಪಿ.ವಾಸು ನಿರ್ದೇಶನ, ದ್ವಾರಕೀಶ ಕಂಬೈನ್ಸ್ ನಿರ್ಮಾಣದಲ್ಲಿ ಮೂಡಿ ಬರ್ತಿರುವ ಚಿತ್ರದಲ್ಲಿ ಬಹುದೊಡ್ಡ ತಾರಾಬಳಗವಿದೆ. ಇದೊಂದು ಕೌಟುಂಬಿಕ ಸಸ್ಪೆನ್ಸ್ ಹಾರರ್ ಮೂವಿಯಾಗಿದೆ. ಹೀಗಾಗಿ ಶಿವಣ್ಣನ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.