‘ಕೈ’ ಸಭೆಯಲ್ಲಿ ಸಿದ್ದು ವಿಚಾರಕ್ಕೆ ಮುಖಂಡರು ಶಾಕ್.. ಹೊರ ನಡೆದ ಮುನಿಯಪ್ಪ

349

ಬೆಂಗಳೂರು: ಉಪ ಚುನಾವಣೆ ಸಂಬಂಧ ಕಾಂಗ್ರೆಸ್ ಸಭೆ ನಡೆಸಿದೆ. ಈಗಾಗ್ಲೇ 8 ಕ್ಷೇತ್ರಗಳ ಅಭ್ಯರ್ಥಿಗಳನ್ನ ಫೈನಲ್ ಮಾಡಿರುವ ಕಾಂಗ್ರೆಸ್, ಉಳಿದ 7 ಕ್ಷೇತ್ರಗಳ ಅಭ್ಯರ್ಥಿಗಳ ಹುಡುಕಾಟದಲ್ಲಿದೆ. ಈ ಕುರಿತು ಸಭೆ ನಡೆಸಲಾಗಿದೆ. ಇಲ್ಲಿ ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತಿಗೆ ನಾಯಕರು ಶಾಕ್ ಆಗಿದ್ದಾರೆ.

ನೀವು ಸೂಚಿಸಿದ ಅಭ್ಯರ್ಥಿಗಳನ್ನ ಆಯ್ಕೆ ಮಾಡೋಣ. ನಾವು ಬಂದು ಪ್ರಚಾರ ಮಾಡ್ತೀವಿ. ಆದ್ರೆ, ಅವರನ್ನ ಗೆಲ್ಲಿಸುವ ಹೊಣೆ ನಿಮ್ಮದು ಅಂತಾ ಸಿದ್ದರಾಮಯ್ಯ ಹೇಳಿದ್ದಾರೆ. ಇದ್ರಿಂದ ಶಾಕ್ ಆದ ನಾಯಕರು, ನಿಮ್ಮ ವಿಚಾರ ಇಲ್ಲಿ ಹೇಳಿದ್ರೆ ಹೇಗೆ ಎಂದು ಕೆ.ಹೆಚ್ ಮುನಿಯಪ್ಪ, ಬಿ.ಕೆ ಹರಿಪ್ರಸಾದ ಸೇರಿ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಸಾಮೂಹಿಕ ನಾಯಕತ್ವದಲ್ಲಿ ಹೋಗಬೇಕು. ಈ ಬಗ್ಗೆ ಕಾರ್ಯಕರ್ತರೊಂದಿಗೆ ಮಾತ್ನಾಡಬೇಕು. ಅವರ ಸಲಹೆ ಪಡೆಯಬೇಕು. ನಿಮ್ಮಿಷ್ಟದ ಅಭ್ಯರ್ಥಿಯನ್ನ ಕಣಕ್ಕೆ ಇಳಿಸಿ ಎಂದರೆ ಹೇಗೆ ಎಂದು ಕೆ.ಹೆಚ್ ಮುನಿಯಪ್ಪ ಸಭೆಯಿಂದ ಹೊರ ನಡೆದಿದ್ದಾರೆ.

ಸಭೆಯಲ್ಲಿ ಕೆಪಿಸಿಸ ಅಧ್ಯಕ್ಷ ದಿನೇಶ ಗುಂಡೂರಾವ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಎಸ್.ಆರ್ ಪಾಟೀಲ, ಕೆ.ಜೆ ಜಾರ್ಜ್, ಕೆ.ಆರ್ ರಮೇಶ ಕುಮಾರ, ಉಮಾಶ್ರೀ, ಮೋಟಮ್ಮ, ರಾಣಿ ಸತೀಶ, ಹೆಚ್.ಎಂ ರೇವಣ್ಣ, ಟಿ.ಬಿ ಜಯಚಂದ್ರ, ಬಿ.ಕೆ ಹರಿಪ್ರಸಾದ್, ಕೆ.ರೆಹಮಾನ ಖಾನ್, ಎಐಸಿಸಿ ಕಾರ್ಯದರ್ಶಿ ಸಲೀಂ ಅಹಮದ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!