ಪ್ರಜಾಸ್ತ್ರ ಸುದ್ದಿ
ಕೋಲಾರ: ಲೋಕಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಿಚಾರ ತಾರಕ್ಕೆ ಏರಿದೆ. ಸಚಿವ ಕೆ.ಹೆಚ್ ಮುನಿಯಪ್ಪ ಹಾಗೂ ವಿಧಾನ ಪರಿಷತ್ ಸದಸ್ಯರಾದ ನಜೀರ್ ಅಹ್ಮದ್, ಅನಿಲ್ ಕುಮಾರ್ ಟೀಂ ನಡುವೆ ಜಟಾಪಟಿ ನಡೆದಿದೆ.
ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವ ಹಂತಕ್ಕೂ ಸಹ ಈ ನಾಯಕರು ಹೋಗಿದ್ದಾರೆ. ರಾಜೀನಾಮೆ ಪತ್ರವನ್ನು ಮಾಧ್ಯಮದವರಿಗೆ ತೋರಿಸಿದರು. ಸಿಎಂ, ಡಿಸಿಎಂ ಜೊತೆಗೆ ಚರ್ಚಿಸಿದ ಬಳಿಕ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.
ಮಾಲೂರು ಶಾಸಕ ಕೆ.ವೈ ನಂಜೇಗೌಡ ಮಾತನಾಡಿ, ಬಲಗೈ ಸಮುದಾಯದ ಯಾರಿಗೆ ಟಿಕೆಟ್ ಕೊಟ್ಟರೂ ನಮ್ಮ ಅಭ್ಯಂತರ ಇಲ್ಲ. ವಿಧಾನಸಭೆ ಚುನಾವಣೆಯಲ್ಲಿ ನಮ್ಮೆಲ್ಲರನ್ನು ಸೋಲಿಸಲು ಮುನಿಯಪ್ಪ ಪ್ರಯತ್ನ ಪಟ್ಟಿದ್ದರು. ಅವರ ಪರವಾದವರಿಗೆ ಟಿಕೆಟ್ ಕೊಡಬಾರದು ಎಂದರು.
ನಾನು 1991ರಲ್ಲಿ ಸಚಿವನಾಗಿದ್ದೆ. ಆಗ ಪುಟಗೋಸಿ ಮುನಿಯಪ್ಪ ಬ್ಯಾಗ್ ಹಿಡಿದುಕೊಂಡು ಬರ್ತಿದ್ದ ಎಂದ ನಜೀರ್ ಅಹಮ್ಮದ್ ಕಿಡಿ ಕಾರಿದರು.