ನಾಳೆ ನನ್ನ ಪತಿ ಸತ್ಯ ಬಹಿರಂಗ ಪಡಿಸುತ್ತಾರೆ: ಸುನೀತಾ ಕೇಜ್ರಿವಾಲ್

93

ಪ್ರಜಾಸ್ತ್ರ ಸುದ್ದಿ

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಸಿದಿಂತೆ ಬಂಧನಕ್ಕೆ ಒಳಗಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪತ್ನಿ ಸುನೀತಾ ಬುಧವಾರ ಮಾಧ್ಯಮಗೋಷ್ಠಿ ನಡೆಸಿ, ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು. ನಾಳೆ ನನ್ನ ಪತಿ ಕೋರ್ಟ್ ನಲ್ಲಿ ಸತ್ಯ ಬಹಿರಂಗ ಪಡಿಸುತ್ತಾರೆ ಎಂದರು.

ದೆಹಲಿಯಲ್ಲಿನ ನೀರು ಹಾಗೂ ಒಳಚರಂಡಿ ಸಂಬಂಧ ಸಚಿವೆ ಅತಿಶಿಗೆ ಅರವಿಂದ್ ಕೇಜ್ರಿವಾಲ್ ಪತ್ರ ಬರೆದಿದ್ದರು. ಇದರ ವಿರುದ್ಧ ಕೇಂದ್ರ ಸರ್ಕಾರ ದೂರು ದಾಖಲಿಸಿದೆ. ಇವರಿಗೆ ಜನರು ಸಂಕಷ್ಟದಲ್ಲಿರಬೇಕು ಎನಿಸಿದೆ, ದೆಹಲಿ ನಾಶ ಮಾಡಲು ನೋಡುತ್ತಿದ್ದಾರೆಯೇ ಎಂದು ಕಿಡಿ ಕಾರಿದ್ದಾರೆ.

ಅಬಕಾರಿ ನೀತಿ ಹಗರಣದಲ್ಲಿ ಇಡಿ ಅಧಿಕಾರಿಗಳು 250ಕ್ಕೂ ಹೆಚ್ಚು ಕಡೆ ದಾಳಿ ನಡೆಸಿದ್ದಾರೆ. ಏನೂ ಸಿಕ್ಕಿಲ್ಲ. ಹಣ ಎಲ್ಲಿದೆ ಎನ್ನುವುದು ನನ್ನ ಪತಿ ನಾಳೆ ಬಹಿರಂಗ ಪಡಿಸಲಿದ್ದಾರೆ ಅಂತಾ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!