ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕರೋನಾದಿಂದಾಗಿ ಜೂನ್ 7ರ ತನಕ ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿತ್ತು. ಬಳಿಕ ಸೋಂಕು ಹೆಚ್ಚಿಗೆ ಆಗ್ತಿದೆ ಎಂದು ಜೂನ್ 14ರ ತನಕ ಮುಂದುವರೆಸಲಾಯ್ತು. ಕಳೆದೊಂದು ವಾರದಿಂದ ರಾಜ್ಯದಲ್ಲಿ ಸೋಂಕಿನ ಪ್ರಮಾಣ ಇಳಿಕೆಯಾಗ್ತಿದ್ದು, ಅನ್ ಲಾಕ್ ಆಗುತ್ತಾ ಅನ್ನೋ ಪ್ರಶ್ನೆ ಮೂಡಿದೆ.
ಮುಖ್ಯಮಂತ್ರಿ ಸಹ ಅನ್ ಲಾಕ್ ಬಗ್ಗೆ ಹೇಳಿದ್ರು. ಸೋಮವಾರದಿಂದ ನಿಧಾನವಾಗಿ ಲಾಕ್ ಡೌನ್ ಸಡಿಲಿಕೆ ಮಾಡಲಾಗುತ್ತೆ ಎಂದು. ಅಲ್ದೇ, ಸೋಂಕಿನ ಪ್ರಮಾಣ ಕಡಿಮೆ ಇರುವ ಜಿಲ್ಲೆಗಳಲ್ಲಿ ಅನ್ ಲಾಕ್ ಘೋಷಿಸಲಾಗುತ್ತೆ ಅನ್ನೋ ಮಾತುಗಳು ಸಹ ಕೇಳಿ ಬಂದಿದ್ವು.
ರಾಜ್ಯದಲ್ಲಿ ಈಗ ಕರೋನಾ ಸೋಂಕು ಹಾಗೂ ಸಾವಿನ ಪ್ರಮಾಣ ಇಳಿಕೆ ಕಾಣಿಸುತ್ತಿದೆ. ಹೀಗಾಗಿ ಜೂನ್ 14ಕ್ಕೂ ಮೊದ್ಲೇ ಲಾಕ್ ಡೌನ್ ತೆರವುಗೊಳಿಸುವ ಮೂಲಕ ಜನರಿಗೆ ಮತ್ತೆ ಎಂದಿನಿಂತೆ ಜೀವನ ನಡೆಸಲು ಅವಕಾಶ ನೀಡಲಾಗುತ್ತಾ ಅನ್ನೋ ಪ್ರಶ್ನೆ ಮೂಡಿದೆ.