ಪ್ರಜಾಸ್ತ್ರ ಸುದ್ದಿ
ಬಾಗಲಕೋಟೆ: ಮುಂಬರುವ ಬೆಳಗಾವಿ ಲೋಕಸಭಾ ಉಪ ಚುನಾವಣೆ ಸಂಬಂಧ, ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ ಮುತಾಲಿಕ್ ಬಿಜೆಪಿ ವರಿಷ್ಠರನ್ನ ಭೇಟಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಬೇಕು ಎನ್ನುತ್ತಿದ್ದು ಟಿಕೆಟ್ ಗಾಗಿ ವರಿಷ್ಠರನ್ನ ಭೇಟಿಯಾಗಿದರಂತೆ.
ನನ್ಗೆ 66 ವರ್ಷ. ಇದು ಕೊನೆಯ ಚುನಾವಣೆ. ಬಿಜೆಪಿ ಟಿಕೆಟ್ ನೀಡಿದ್ರೆ ಗೆದ್ದ ಬಂದ್ಮೇಲೆ ಮುಂದಿನ 3 ವರ್ಷ ಅವಧಿಯಲ್ಲಿ ಅಭಿವೃದ್ಧಿ ಹಾಗೂ ಹಿಂದುತ್ವದ ಕೆಲಸ ಮಾಡುತ್ತೇನೆ. ಒಂದು ವೇಳೆ ಟಿಕೆಟ್ ಅಂಗಡಿ ಕುಟುಂಬಸ್ಥರಿಗೋ, ಶೆಟ್ಟರ ಕುಟುಂಬಸ್ಥರಿಗೋ ನೀಡಿದ್ರು ಸಹ ಪ್ರಚಾರಕ್ಕೆ ಕರೆದ್ರೆ ಹೋಗುತ್ತೇನೆ ಎಂದು ಮುತಾಲಿಕ್ ತಿಳಿಸಿದ್ದಾರೆ.