ಬೆಂಗಳೂರು ರಸ್ತೆ ಗುಂಡಿಗೆ ಮತ್ತೊಂದು ಜೀವ ಬಲಿ

222

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಸ್ತೆ ಗುಂಡಿಯ ಹಾವಳಿ ತಪ್ಪಿದ್ದಲ್ಲ. ಇಲ್ಲಿನ ಗುಂಡಿಯಿಂದ ಬೈಕ್ ಸವಾರರು ಬಿದ್ದು ಆಗಾಗ ಪ್ರಾಣ ಕಳೆದುಕೊಳ್ಳುತ್ತಲೇ ಇದ್ದಾರೆ. ಆ ಸಾಲಿಗೆ ಇದೀಗ ಎಂಎಸ್ ಪಾಳ್ಯದ ನಿವಾಸಿ ಅಶ್ವಿನ್ ಅನ್ನೋ 27 ವರ್ಷದ ಯುವಕ
ಸೇರಿದ್ದಾನೆ.

ಭಾನುವಾರ ರಾತ್ರಿ ಬೈಕ್ ನಲ್ಲಿ ಮನೆಗೆ ಹೊರಟಿದ್ದಾಗ ಬಿಡಬ್ಲುಎಸ್ಎಸ್ಬಿ ಅಗೆದಿದ್ದ ಗುಂಡಿಗೆ ಬಿದ್ದು ಗಂಭೀರ ಗಾಯಗೊಂಡಿದ್ದ. ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾನೆ.

ಮೃತ ಅಶ್ವಿನ್ ತಾಯಿ ಗೋಳಾಟ ನೋಡಲಾಗದು. ಇದ್ದೊಬ್ಬ ಮಗನನ್ನು ಕಳೆದುಕೊಂಡೆನಲ್ಲ. ಗುಂಡಿಯ ಬಗ್ಗೆ ನಾನೇ ಎಚ್ಚರಿಸಿದ್ದೆ. ಅದೆ ಗುಂಡಿಗೆ ಬಿದ್ದು ಮಗ ಪ್ರಾಣ ಕಳೆದುಕೊಂಡ ಎಂದು ತಾಯಿ ವಸುಧಾ ಕಣ್ಣೀರು ಹಾಕುತ್ತಿದ್ದಾರೆ. ಬಿಬಿಎಂಪಿ ಅಧಿಕಾರಿಗಳ ಭ್ರಷ್ಟಾಚಾರದ ವಿರುದ್ಧ ಸ್ಥಳೀಯರು, ಸ್ನೇಹಿತರು ಪ್ರತಿಭಟನೆ ನಡೆಸುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!