ಪ್ರಜಾಸ್ತ್ರ ಸುದ್ದಿ
ಮೈಸೂರು: ಬಿಜೆಪಿಯವರು ನನ್ನನ್ನು ಪಕ್ಷಕ್ಕೆ ಸೇರಿಸಿಕೊಂಡು ಮೋಸ ಮಾಡಿದರು. ಮೋಸ ಮಾಡುವುದರಲ್ಲಿ ನಂಬರ್ ಒನ್. ಅನ್ಯಾಯ ಮಾಡುವುದರಲ್ಲಿ ನಿಸ್ಸೀಮರು ಎಂದು ಮಾಜಿ ಎಂಎಲ್ಸಿ ಸಂದೇಶ್ ನಾಗರಾಜ್ ವಾಗ್ದಾಳಿ ನಡೆಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿಯಲ್ಲಿ ಸಕ್ರಿಯನಾಗಿಲ್ಲ. ಎಚ್.ವಿಶ್ವನಾಥಗೂ ಮೋಸ ಮಾಡಿದರು. ನನಗೂ ಮೋಸ ಮಾಡಿದರು. ಬಿಜೆಪಿ ಸಹವಾಸ ಸಾಕು. ಸಿದ್ದರಾಮಯ್ಯ ಜೊತೆ ಮಾತನಾಡದೀನಿ. ಡಿ.ಕೆ ಶಿವಕುಮಾರ್ ಜೊತೆ ಮಾತನಾಡುತ್ತೇನೆ. ನಾನು ಕಾಂಗ್ರೆಸ್ ಸೇರುತ್ತೇನೆ ಎಂದರು.
ಯಡಿಯೂರಪ್ಪನವರನ್ನು ಒಳ್ಳೆಯತನದಿಂದ ಮುಗಿಸಿದ ಬಿಜೆಪಿ ಅವರ ಮಗ ವಿಜಯೇಂದ್ರನನ್ನು ವರುಣಾ ಕ್ಷೇತ್ರಕ್ಕೆ ತಂದು ಬಲಿ ಕೊಡುತ್ತಿದ್ದಾರೆ. ವಿಜಯೇಂದ್ರ ರಾಜಕೀಯ ಭವಿಷ್ಯ ಚೆನ್ನಾಗಿರಬೇಕಾದರೂ ಶಿಕಾರಿಪುರದಿಂದಲೇ ಸ್ಪರ್ಧಿಸಲಿ ಅಂತಾ ಹೇಳಿದರು.