ಪ್ರಜಾಸ್ತ್ರ ಸುದ್ದಿ
ಕುಣಿಗಲ್: ತಾಲೂಕಿನ ಬೇಗೂರು ಸೇತುವೆ ಹತ್ತಿರದ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿದೆ. ಇನೋವಾ ಕಾರು ಹಾಗೂ ಟಿಟಿ ವಾಹನದ ನಡುವೆ ನಡೆದಿದೆ.
ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಟಿಟಿ ಹಾಗೂ ಇನೋವಾ ಕಾರಿನಲ್ಲಿದ್ದ 6 ಜನರು ಸ್ಥಿತಿ ಗಂಭೀರವಾಗಿದೆ. ಇನ್ನು ಎದುರಿಗೆ ಬರುತ್ತಿದ್ದ ಬೈಕಿಗೂ ಡಿಕ್ಕಿಯಾದ ಪರಿಣಾಮ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.