ಪ್ರಜಾಸ್ತ್ರ ಸುದ್ದಿ
ಮೈಸೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ತಮಗೆ ಜೆಡಿಎಸ್ ನಿಂದ ಟಿಕೆಟ್ ತಪ್ಪಲು ಮೈಸೂರು ಮಹಾರಾಜರು ಕಾರಣ ಎಂದು ಹೇಳುವ ಮೂಲಕ ಸಂದೇಶ್ ನಾಗರಾಜ್ ಗಂಭೀರ ಆರೋಪ ಮಾಡಿದ್ದಾರೆ ಅಪ್ಪ ಮಗ ಕಿತ್ತಾಡಿಕೊಂಡು ನನಗೆ ಅವಮಾನ ಮಾಡಿದರು. ನಂತರ ಮಹಾರಾಜರ ಮಾತು ಕೇಳಿ ನನಗೆ ಟಿಕೆಟ್ ಕೊಡಲಿಲ್ಲವೆಂದು ಆರೋಪಿಸಿದ್ದಾರೆ.
ಮೈಸೂರು ಮಹಾರಾಜರು ಎಂದಿದ್ದರು ಎಲ್ಲರಿಗೂ ಶಾಕ್. ಈ ಬಗ್ಗೆ ಸ್ಪಷ್ಟ ಪಡಿಸಿದ ಸಂದೇಶ್ ನಾಗರಾಜ್, ಮೈಸೂರು ಮಹಾರಾಜರು ಅಂದರೆ ಚಾಮರಾಜ್ ಒಡೆಯರ್ ಅಲ್ಲ. ನಮ್ಮಲ್ಲೊಬ್ಬರಿದ್ದಾರೆ ಮಹಾರಾಜರು. ಜೆಡಿಎಸ್ ನಲ್ಲಿ ಅವರೆ ಮಂತ್ರಿ, ಸೇನಾಧಿಪತಿ ಎಲ್ಲಾ. ಕೊನೆಗೆ ಪಕ್ಷದಲ್ಲಿ ಅವರೊಬ್ಬರಿಗೆ ಉಳಿದುಕೊಳ್ಳುತ್ತಾರೆ ಎಂದು ಮಾಜಿ ಸಚಿವ ಸಾ.ರಾ ಮಹೇಶ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.