ಪ್ರಜಾಸ್ತ್ರ ಅಪರಾಧ ಸುದ್ದಿ
ವಿಜಯಪುರ: ತಾನು ಹೆತ್ತ ಮಗನನ್ನೇ ತಂದೆಯೊಬ್ಬ ಕೊಂದ ದಾರುಣ ಘಟನೆ ತಾಲೂಕಿನ ಮಿಂಚನಾಳ ತಾಂಡಾದಲ್ಲಿ ನಡೆದಿದೆ. ಎರಡನೇ ಹೆಂಡತಿ ಮಾತು ಕೇಳಿ, ಮೊದಲನೇ ಹೆಂಡತಿಯ ಮಗುವನ್ನು ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.
ಏನೂ ಅರಿಯದ ಪುಟ್ಟ ಬಾಲಕನನ್ನು ಮೊಬೈಲ್ ಚಾರ್ಜರ್ ನಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಸುಮಿತ್ ವಿನೋದ ಚವ್ಹಾಣ ಹತ್ಯೆಯಾಗಿರುವ ಬಾಲಕ. ತಂದೆ ವಿನೋದ ಚವ್ಹಾಣ ಹಾಗೂ ಮಲತಾಯಿ ಸವಿತಾ ಚವ್ಹಾಣನಿಂದ ಹತ್ಯೆ ನಡೆಸಿದ್ದಾರಂತೆ.
ಅಲ್ದೇ ಮತ್ತೋರ್ವ ಮಗ ಸಂಪತ್ ವಿನೋದ್ ಚವ್ಹಾಣ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೊದಲನೇ ಹೆಂಡತಿ ಸಾವನ್ನಪ್ಪಿದ್ದರಿಂದ ಎಡನೇ ಮದುವೆ ಮಾಡಿಕೊಂಡಿದ್ದ. ಈಗ ನೋಡಿದರೆ ಮಗುವನ್ನೇ ಕೊಂದಿದ್ದಾರೆ. ಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ. ಮಗುವನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.