ಪ್ರಜಾಸ್ತ್ರ ಸುದ್ದಿ
ಚೆನ್ನೈ: ತಮಿಳುನಾಡಿನಲ್ಲಿ ಬಿಜೆಪಿ ವಿವಿಧ ಘಟಕಗಳಿಗೆ ಪದಾಧಿಕಾರಿಗಳನ್ನ ನೇಮಕ ಮಾಡಿದೆ. ಅದಕ್ಕೆ ಬೇರೆ ಪಕ್ಷದ ಕುಟುಂಬಸ್ಥರು, ಸಿನಿಮಾ ತಾರೆಯರು, ಕಾಡುಗಳ್ಳ ವೀರಪ್ಪನ್ ಮಗಳು ಸೇರಿದಂತೆ ಹಲವರಿಗೆ ಸ್ಥಾನ ನೀಡಲಾಗಿದೆ.
ಎಐಎಡಿಎಂಕೆ ಸ್ಥಾಪಕ, ಮಾಜಿ ಸಿಎಂ ದಿ.ಎಂ.ಜಿ ರಾಮಚಂದ್ರನ್ ದತ್ತು ಪುತ್ರಿ ಗೀತಾ, ಮೊಮ್ಮಗ ಎಂ.ಸಿ ಚಕ್ರಪಾಣಿ, ನಟ ರಾಧಾರವಿಗೆ ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಮಾಡಲಾಗಿದೆ. ಇದರ ಜೊತೆಗೆ ರಜನಿಕಾಂತ ಅಳಿಯ ನಟ ಧನುಷ ತಂದೆ ಕಸ್ತೂರಿ ರಾಜು, ನಟ ವಿಜಯಕುಮಾರ ಹಾಗೂ ನಿರ್ದೇಶಕ ಗಂಗೈ ಅಮರನ್ ಅವರಿಗೆ, ವಿಶೇಷ ಸಂಘಟಕರಾಗಿ ಕಾರ್ಯಕಾರಿ ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ.
ಇನ್ನು ಕುಖ್ಯಾತ ಕಾಡುಗಳ್ಳ ವೀರಪ್ಪನ್ ಮಗಳು ವಿದ್ಯಾರಾಣಿಗೆ ಯುವ ಮೋರ್ಚಾ ಉಪಾಧ್ಯಕ್ಷೆಯಾಗಿ ನೇಮಕ ಮಾಡಲಾಗಿದೆ. ಕಳೆದ ಫೆಬ್ರವರಿಯಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ಳು.