ಪ್ರಜಾಸ್ತ್ರ ಸುದ್ದಿ
ರಾಯಚೂರು: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ ಮಾಡಲಾಗಿದೆ. ಹೀಗಾಗಿ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸಿವೆ. ಬಿಜೆಪಿ ಸಹ ಎಂದಿನಂತೆ ಮೋದಿ ಮುಖ ಮುಂದೆ ಮಾಡಿಕೊಂಡು ಚುನಾವಣೆಗೆ ಸಜ್ಜಾಗುತ್ತಿದೆ. ರಾಜ್ಯ ಬಿಜೆಪಿ ನಾಯಕರಲ್ಲಿ ಬರುವ ಒಂದೇ ಒಂದು ಹೆಸರು ಪ್ರಧಾನಿ ಮೋದಿ. ಅವರ ಹೆಸರು ಹೇಳಿಕೊಂಡು ಜನರ ಬಳಿ ಹೋಗುತ್ತಿದ್ದಾರೆ. ಆದರೆ, ಬಿಜೆಪಿ ಶಾಸಕರೊಬ್ಬರು ಮೋದಿನೂ ಇಲ್ಲ, ಯಾರೂ ಇಲ್ಲ. ನಾನು ಸಿಂಗಲ್ ಆರ್ಮಿ. ನಾನೇ ದೇವರು ಎಂದು ಹೇಳಿರುವ ಆಡಿಯೋ ವೈರಲ್ ಆಗಿದೆ.
ರಾಯಚೂರು ಬಿಜೆಪಿ ಶಾಸಕ ಶಿವರಾಜ ಪಾಟೀಲ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿರುವ ಆಡಿಯೋ ವೈರಲ್ ಆಗಿದೆ. ಚುನಾವಣೆಯಲ್ಲಿ ಸೋತರೂ ಚಿಂತೆಯಿಲ್ಲ. ಗೆದ್ದರೂ ಚಿಂತೆಯಿಲ್ಲ. ನಾನು ದೇವರಿದ್ದ ಹಾಗೆ. ಅದಕ್ಕೆ ಹುಡುಗರಿಗೆ ಪ್ರತಿ ದಿನ ನನ್ನ ಕಾಲಿಗೆ ಬೀಳಲು ಹೇಳುತ್ತೇನೆ ಎಂದು ಆಪ್ತರ ಹತ್ತಿರ ಮಾತನಾಡಿರುವ ಆಡಿಯೋ ಎಂದು ಹೇಳಲಾಗುತ್ತಿದೆ. ಇದಕ್ಕೆ ಶಾಸಕ ಶಿವರಾಜ ಪಾಟೀಲ ಹಾಗೂ ಬಿಜೆಪಿ ನಾಯಕರ ಪ್ರತಿಕ್ರಿಯೆ ಏನು ಅನ್ನೋದು ಕಾದು ನೋಡಬೇಕಿದೆ.