ಪ್ರಜಾಸ್ತ್ರ ಸುದ್ದಿ
ಸಿಂದಗಿ: ಇಂದು ಮದರಸಾ ಬೈತುಲ ಉಲೂಮ ಸಿಂದಗಿ ಅವರಣದಲ್ಲಿ ಅಖಿಲ ಭಾರತ ಮಾನವೀಯತೆ ಸಂದೇಶ ವೇದಿಕೆ ಸಿಂದಗಿ ಘಟಕದ ವತಿಯಿಂದ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು, 45 ಯುವಕರು ರಕ್ತದಾನ ಮಾಡಿದರು.
ಇಂದು ನಮ್ಮೆಲ್ಲರಗೆ ಪರಸ್ಪರ ಪ್ರೀತಿ ಗೌರವ ಸೌಹಾರ್ದತೆ ಬಾಂಧವ್ಯತೆ ಹೊಂದಿರುವ ಸಮಾಜದ ಅವಶ್ಯಕತೆ ಇದೆ .ಧರ್ಮದ ಆಧಾರದ ಮೇಲೆ ನಾವು ಒಂದಾಗಲು ಸಾಧ್ಯವಿಲ್ಲ, ಆದರೆ ನಾವು ಮನುಷ್ಯತ್ವ ಮಾನವೀಯತೆ ನೆಲೆಯಲ್ಲಿ ಒಂದಾಗಿರಲು ಸಾಧ್ಯವೆದೆಇದರಲ್ಲಿ ಯಾರದು ಭಿನ್ನಾಭಿಪ್ರಾಯವಿಲ್ಲ.ಇದೇ ಇಂದು ಜಗತ್ತಿಗೆ ಬೇಕಾಗಿರುವುದು.ನಾವೆಲ್ಲರೂ ಮಾನವೀಯತೆಯ ಆಧಾರದ ಮೇಲೆ ಮುಂದೆ ಬರೋಣ.ಮತ್ತು ಸರ್ವರೀತಿಯಲ್ಲಿ ಮಾನವೀಯತೆಯ ಸೇವೆ ಮಾಡೋಣ.
ಇದರಿಂದ ಪ್ರೀತಿ ಸಹೋದರತೆಯ ಆದರ್ಶ ಸಮಾಜ ಸ್ಥಾಪನೆಯಾಗಲಿದೆ ಎಲ್ಲರೂ ಪ್ರೀತಿ ಪ್ರೇರಮ ವಿಶ್ವಾಸ ನಂಬಿಕೆಯಿಂದ ಪರಸ್ಪರ ಒಂದಾಗಿ ಬಾಳಬೇಕು ಅದೇ ಸಮಾಜಕ್ಕೆ ನಾವು ಕೂಡವ ಕೊಡುಗೆ ಹಿರಿಯರ ಕಿರಿಯರಿಗೆ ನಮ್ಮ ದೇಶದ ಉನ್ನತವಾದ ಸಂಸ್ಕೃತಿಯನ್ನು ಹೇಳಿಕೊಡಬೇಕು ಈ ನಮ್ಮ ಭಾರತ ದೇಶದ ದಲ್ಲಿ ಜಾತಿ ಮತ ಪಂಥದವರ ಒಂದಾಗಿ ಬಾಳಬೇಕು ಇದ ರಿಂದ ಇಡೀ ಜಗತ್ತು ಭಾರತ ದತ್ತ ನಿಬ್ಬರಗಾಗಿ ನೋಡುತ್ತ ದೇಶ ವಿ ವಿ ದಧತೆಯಲ್ಲಿ ಎಕತೆ ಕಂಡಂತ ದೇಶ ಇದನ್ನು ಉಳಿಸಿ ಕೂಳ್ಳೂಣ ಎಂದುವೇದಿಕೆಯ ಅಧ್ಯಕ್ಷರು ಮೌಲಾನಾ ದಾವುದ ನದ್ವ ಹೇಳಿದರು ನಂತರ ಬ್ಲಡ್ಬ್ಯಾಂಕ್ನ ವೈದ್ಯ ಅಧಿಕಾರಿಗಳು ರಾಜಶೇಖರ ನರಗೋದಿ ಮಾತನಾಡಿದರು ಪ್ರತಿಯೊಬ್ಬ ಆರೋಗ್ಯವಂತರು ರಕ್ತದಾನ ಮಾಡಬೇಕು.ರಕ್ತದಾನವೇ ಬಹುದೊಡ್ಡ ದಾನ..ರಕ್ತದಾನ ಮಾಡುವುದರಿಂದ ಜನರ ಜೀವ ಉಳಿಸಿದಂತಾಗುತ್ತದೆ.
ರಕ್ತದಾನದಿಂದ ಅನೇಕ ರೋಗ,ಆಪತ್ತುಗಳಿಂದ ಪಾರಾಗಬಹುದು.ಕೇಲವು ಜನ ವೇದಿಕೆ ಹೆಸರು ಕೇಳಿ ಮಾನವೀಯತೆ ಎಂದರೆ ಎನು ಎಂದು ನನಗೆ ಕೇಳುತ್ತಾರೆ ನಾವು ಮಾನವರೆಲ್ಲವೇ. ಅಂದಾಗ ನಾನು ಅದಕ್ಕೆ ಉತ್ತರವೇ ಕೊಟ್ಟೆ ಏನೆಂದರೆ ಒಬ್ಬ ಮನುಷ್ಯ ಆಕ್ಸಿಡೆಂಟ್ದಲ್ಲಿ ಅರ್ಧ ಭಾಗ ಕಟ್ಟ ವಾಗಿತ್ತು ಆದರೆ ಅವನು ಎಲ್ಲರಿಗೆ ನೀರು ಬಿಡುತ್ತಿದ್ದಾಗ ಅಲ್ಲಿನ ಜನರು ವಿಡಿಯೋ ಫೋಟೋದಲ್ಲಿ ಮ್ಯಾಗ್ನರ್ ಆಗಿದ್ದರು ಯಾರೋ ಬಂದು ನೀರು ಕೊಡಲಿಲ್ಲ ಆದರೆ 108 ಆಂಬುಲೆನ್ಸ್ ಅವರು ಬಂದು ಅವನಿಗೆ ನೀರು ಕುಡಿಸಿದರು ಮತ್ತು ಇದು ಮಾನವೀಯತೆಯ ಆ ಹುಡುಗ ಸರ್ ನಾನು ಸ್ವಲ್ಪ ಸಮಯದಲ್ಲಿ ಸಾಯುತ್ತಿದ್ದೇನೆ ನನ್ನ ಕೊನೆಯ ಆಸೆ ಇದೆ ಏನೆಂದರೆ ನನ್ನ ಹೃದಯ ಮತ್ತು ನನ್ನ ಕಣ್ಣುಗಳು ಮತ್ತು ನನ್ನ ಕಿಡಿನಿ ಯಾರಿಗೂ ದಾನ ಮಾಡಿರಿ ಎಂದು ಹೇಳಿದನು ಇದು ಮಾನವೀಯತೆ ಎಂದು ರಾಜಶೇಖರ ಸರ ತಿಳಿಸಿ ಹೇಳಿದರು ಈ ಸಂದರ್ಭದಲ್ಲಿ ಮೌಲಾನಾ ಕಲೀಮುಲ್ಲಾ, ಮೌಲಾನಾ ಇಸ್ಮಾಯಿಲ್, ಮೌಲಾನಾ ಇರಪಾನ ಶ್ರಿ ಡಾ ದೇವಾನಂದ ಮೇಶರಾಮ, ಜಿಲ್ಲಾ ಆಸ್ಪತ್ರೆಯ ಅಧಿಕಾರಿಗಳು ಆಯೀಶಾ ಅನಜುಂ ಮತ್ತಿತರರು ಉಪಸ್ಥಿತರಿದ್ದರು.