ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಸಾರಿಗೆ ನೌಕರರ ಮುಷ್ಕರ 5ನೇ ದಿನಕ್ಕೆ ಕಾಲಿಟ್ಟಿದೆ. ಕೆಲವು ಕಡೆ ಕೆಲವು ಸಿಬ್ಬಂದ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇದಕ್ಕೆ ಕೆಲವರು ಬೆದರಿಕೆ ಹಾಕುವುದು ಮಾಡ್ತಿದ್ದು, ಬಸ್ ಗಳಿಗೆ ಪೊಲೀಸ್ ಭದ್ರತೆ ನೀಡಲಾಗ್ತಿದೆ. ಇದರ ನಡುವೆ ಸರ್ಕಾರ ಮತ್ತೊಂದು ಅಸ್ತ್ರ ಪ್ರಯೋಗಿಸಿದ್ದು, ಮುಷ್ಕರ ನಿರತ ಸಿಬ್ಬಂದಿಗೆ ಮಾರ್ಚ್ ತಿಂಗಳ ಸಂಬಳ ನೀಡುವುದಿಲ್ಲ ಎಂದಿದೆ.
ಮುಷ್ಕರದ ನಡುವೆ ಯಾರೆಲ್ಲ ಕರ್ತವ್ಯಕ್ಕೆ ಹಾಜರಾಗಿ ಸೇವೆ ಸಲ್ಲಿಸ್ತಿದ್ದಾರೋ ಅವರಿಗೆ ಮಾತ್ರ ಸಂಬಳ ಸಿಗಲಿದೆ. ಉಳಿದಂತೆ ಇತರರಿಗೆ ವೇತನ ಕಟ್ ಆಗಲಿದೆ. ಇದರ ನಡುವೆ 55 ವರ್ಷ ಮೇಲ್ಪಟ್ಟ ನೌಕರರು ಫಿಟ್ನಸ್ ಸರ್ಟಿಫಿಕೇಟ್ ನೀಡಬೇಕು. ಇನ್ನು ಅಂತರ ವಿಭಾಗ ವರ್ಗಾವಣೆ ಪಡೆದುಕೊಂಡವರು ಕರ್ತವ್ಯಕ್ಕೆ ಹಾಜರಾಗಬೇಕು. ಒಂದು ವೇಳೆ ಆಗದಿದ್ರೆ ಆದೇಶವನ್ನ ಹಿಂಪಡೆಯಲಾಗುವುದು ಎಂದು ಎಚ್ಚರಿಸಿದೆ.