ಪ್ರಜಾಸ್ತ್ರ ಸುದ್ದಿ
ಶ್ರೀನಗರ: ಕೇವಲ 8 ಗಂಟೆಯ ಅಂತರದಲ್ಲಿ ಎರಡನೇ ಬಾರಿಗೆ ಬಾಂಬ್ ಬ್ಲಾಸ್ಟ್ ಆಗಿದೆ. ಗುರುವಾರ ಮುಂಜಾನೆ ಕಾಶ್ಮೀರದ ಉದ್ದಂಪುರ ಜಿಲ್ಲೆಯ ಹಳೆ ಬಸ್ ನಿಲ್ದಾಣದ ಹತ್ತಿರ ನಿಂತಿದ್ದ ಬಸ್ ನಲ್ಲಿ ಸ್ಫೋಟ ಸಂಭವಿಸಿದೆ.
ಕಳೆದ ರಾತ್ರಿ ಸುಮಾರು 10.45ರಲ್ಲಿ ಡೊಮೈಲಾ ಚೌಕ್ ನಲ್ಲಿ ಸಹ ನಿಂತಿದ್ದ ಬಸ್ ವೊಂದು ಸ್ಫೋಟಗೊಂಡಿದೆ. ಈ ವೇಳೆ ಇಬ್ಬರು ಗಾಯಗೊಂಡಿದ್ದರು. ಇಲ್ಲಿಂದ ನಾಲ್ಕು ಕಿಲೋ ಮೀಟರ್ ಅಂತರದಲ್ಲಿ ಇಂದು ಮುಂಜಾನೆ ಸ್ಫೋಟವಾಗಿದೆ. ಯಾವುದೇ ಸಾವು ನೋವು ಸಂಭವಿಸಿಲ್ಲ.