ಬಾಂಬ್ ಬೆದರಿಕೆ ಪತ್ರ: ನಾಲ್ವರು ವಶಕ್ಕೆ

265

ಪ್ರಜಾಸ್ತ್ರ ಸುದ್ದಿ

ಡ್ರಗ್ಸ್ ಕೇಸಿನಲ್ಲಿ ಬಂಧಿತರಾಗಿರುವ ನಟಿಯರಾದ ರಾಗಿಣಿ ಹಾಗೂ ಸಂಜನಾರನ್ನ ಜಾಮೀನು ಮೇಲೆ ಬಿಡುಗಡೆ ಮಾಡಬೇಕು ಹಾಗೂ ಡಿಜೆ ಹಳ್ಳಿ ಕೆಜೆ ಹಳ್ಳಿ ಪ್ರಕರಣದಲ್ಲಿ ಬಂಧಿತರಾಗಿರುವವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಾರದು. ಇಲ್ಲದೆ ಹೋದ್ರೆ ನ್ಯಾಯಾಧೀಶರ ಕಾರ್ ಸ್ಫೋಟಿಸುವುದಾಗಿ ಬೆದರಿಕೆ ಪತ್ರ ಬರೆದಿರುವ ಸಂಬಂಧ ನಾಲ್ವರನ್ನ ವಶಕ್ಕೆ ಪಡೆಯಲಾಗಿದೆ.

ಈ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡ ಪೊಲೀಸರು ರಾತ್ರಿ 12 ಗಂಟೆಯ ಸುಮಾರಿಗೆ ತುಮಕೂರಿನ ಚೇಳೂರಿನಲ್ಲಿ ರಮೇಶ ಹಾಗೂ ಚೆನ್ನಬಸವ ಎಂಬುವವರನ್ನ ಬಂಧಿಸಲಾಗಿದೆ. ಇವರನ್ನ ತೀವ್ರ ವಿಚಾರಣೆ ನಡೆಸಿದಾಗ, ಲಿಂಗದಹಳ್ಳಿ ನಿವಾಸಿ ರಾಜಶೇಖರ, ಹಾಗಲವಾಡಿಯ ವೇದಾಂತ ಎಂಬುವವರನ್ನ ತಡರಾತ್ರಿ ವಿಚಾರಣೆಗೆ ಒಳಪಡಿಸಲಾಗಿದೆ.

ರಮೇಶ, ರಾಜಶೇಖರ ಹಾಗೂ ವೇದಾಂತ ನಡುವೆ ಆಸ್ತಿ ಕಲಹ ಇದೆ. ಇನ್ನು ರಮೇಶನ ಕುಟುಂಬಸ್ಥರು ಅನಕ್ಷರಸ್ಥರಾಗಿದ್ದು, ಹೇಗಾದ್ರು ಮಾಡಿ ಯಾರದ್ರೂ ಒಬ್ಬರನ್ನ ಜೈಲಿಗೆ ಕಳುಹಿಸಲು ಈ ರೀತಿಯ ಪ್ಲಾನ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ದಾಖಲೆ ಕಲೆ ಹಾಕಿರುವ ಪೊಲೀಸರು ತನಿಖೆ ನಡೆಸ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!