ಸಿಂದಗಿ: ಜನವರಿ 25 ಶನಿವಾರ ಮಧ್ಯಾಹ್ನ ಸುಮಾರು 2 ಗಂಟೆಯಲ್ಲಿ ಮೂವರು ಸ್ನೇಹಿತರೊಂದಿಗೆ ಈಜಲು ಹೋದ ರಾಜಕುಮಾರ ಶ್ರೀಮಂತ ತಳವಾರ ಅನ್ನೋ ಬಾಲಕ ಕ್ಯಾನಾಲ್ ನಲ್ಲಿ ನಾಪತ್ತೆಯಾಗಿದ್ದಾನೆ. ಪಟ್ಟಣದಿಂದ ಸುಮಾರು ಏಳೆಂಟು ಕಿಲೋ ಮೀಟರ್ ದೂರದಲ್ಲಿರುವ ಬಂದಾಳ ಗ್ರಾಮದ ಹತ್ತಿರದ ಕ್ಯಾನಲ್ಗೆ ಈಜಲು ಹೋದಾಗ ಈ ಅನಾಹುತ ಸಂಭವಿಸಿದೆ.
ರಾಜಕುಮಾರ ತಳವಾರ ನೀರಲ್ಲಿ ಮುಳುಗಿದ್ದಾನೆ. ದಂಡೆಯ ಮೇಲೆ ನಿಂತು ಈಜಲು ರೆಡಿಯಾಗ್ತಿದ್ದ ಸ್ನೇಹಿತರು ಕಿರುಚಾಡಲು ಶುರು ಮಾಡಿದ್ದಾರೆ. ಆಗ ಪಕ್ಕದ ಹೊಲದಲ್ಲಿ ಕೆಲಸ ಮಾಡ್ತಿರುವ ಯುವಕನೊಬ್ಬ ಓಡಿ ಬಂದಿದ್ದಾನೆ. ಆತನ ಎದುರು ನಡೆದ ವಿಷ್ಯ ಹೇಳಿದ್ದಾರೆ. ತಕ್ಷಣ ಎಲ್ಲರಿಗೂ ಮಾಹಿತಿ ನೀಡಲಾಗಿದೆ. ಆಗ ಪೊಲೀಸ್ರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದ್ದಾರೆ. ಅಲ್ದೇ, ಕ್ಯಾನಲ್ಗೆ ಇಳಿದು ಹುಡುಕಾಟ ನಡೆಸಿದ್ದಾರೆ. ಆದ್ರೆ, ಎರಡು ದಿನವಾದ್ರೂ ಬಾಲಕನ ಸುಳಿವು ಮಾತ್ರ ಪತ್ತೆಯಾಗಿಲ್ಲ.
ಘಟನಾ ಸ್ಥಳಕ್ಕೆ ತಹಶೀಲ್ದಾರ್ ಬಿ.ಎಸ್ ಕಡಕಭಾವಿ, ಸಿಪಿಐ ಸತೀಶ ಕಾಂಬಳೆ, ಪಿಎಸ್ಐ ಹೊಸಮನಿ ಸೇರಿದಂತೆ ಪೊಲೀಸ್ ಸಂಬಂಧಿ ಬಂದು ಪ್ರತಿಯೊಂದು ಮಾಹಿತಿ ಪಡೆದಿದ್ದಾರೆ. ಬಾಲಕ ರಾಜಕುಮಾರ ತಳವಾರನ ಮೃತದೇಹ ಪತ್ತೆಗೆ ಸಂಬಂಧಿಸಿದಂತೆ ಸೂಕ್ತ ಕಾರ್ಯಾಚರಣೆ ನಡೆಸಲಾಗ್ತಿದೆ. ಈ ಸಂಬಂಧ ಜಿಲ್ಲಾಧಿಕಾರಿಯೊಂದಿಗೂ ಮಾತ್ನಾಡಿದ್ದು ಮೃತದೇಹ ಪತ್ತೆಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ತಹಶೀಲ್ದಾರ್ ಬಿ.ಎಸ್ ಕಡಭಾವಿ ತಿಳಿಸಿದ್ದಾರೆ. ಇನ್ನು ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎಂ.ಸಿ ಮನಗೂಳಿ ಅವರು ಬಾಲಕನ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಸೌಲಭ್ಯ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ