ರಾಮ ಜಪದೊಂದಿಗೆ ಹಿಂದೂ ವ್ಯಕ್ತಿಯ ಸಂಸ್ಕಾರ ಮಾಡಿದ ಮುಸ್ಲಿಂರು.. ಇದು ಅಲ್ವಾ ಭಾರತದ ಗುಣ…

394

ಲಕ್ನೋ: ಬದುಕಿದ್ದಾಗಲೂ ಜಾತಿ, ಧರ್ಮ ಸತ್ತಮೇಲೂ ಜಾತಿ, ಧರ್ಮ ಅನ್ನೋ ಜನರ ನಡುವೆ ಜಾತಿ ಧರ್ಮ ನೋಡದೆ ಮಾನವೀಯ ಗುಣ ಹೊಂದಿರುವ ಅಸಂಖ್ಯಾತರಿದ್ದಾರೆ. ಹಿಂದೂ, ಮುಸ್ಲಿ, ಕ್ರೈಸ್ತ್ ಸೇರಿದಂತೆ ಆ ಧರ್ಮ ಈ ಧರ್ಮ ಅನ್ನದೆ ಎಲ್ಲರೂ ನಮ್ಮವರು ಅನ್ನೋ ಜನರಿದ್ದಾರೆ ಅನ್ನೋದು ಆಗಾಗ ಸಾಬೀತಾಗಿದೆ. ಅದಕ್ಕೆ ಇದು ಸಾಕ್ಷಿ.

ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ಆನಂದ ವಿಹಾರ ಪ್ರದೇಶದಲ್ಲಿ40 ವರ್ಷದ ರವಿ ಶಂಕರ ಎಂಬಾತ ಕ್ಯಾನ್ಸರ್ ನಿಂದ ಶನಿವಾರ ಮಧ್ಯಾಹ್ನ ಮೃತಪಟ್ಟಿದ್ದಾನೆ. ಕರೋನಾ ಮಹಾಮಾರಿಯಿಂದಾಗಿ ಈತನ ಅಂತ್ಯ ಸಂಸ್ಕಾರಕ್ಕೆ ಸಂಬಂಧಿಕರು ಯಾರೂ ಬಂದಿಲ್ಲ. ಆಗ ನೆರೆಯ ಮುಸ್ಲಿಂ ಸಹೋದರರು ಆತನ ಕುಟುಂಬಕ್ಕೆ ನೆರವಾಗಿದ್ದಾರೆ.

ಅಲ್ಲಿಯ ಪದ್ಧತಿಯಂತೆ ಅಂತ್ಯ ಸಂಸ್ಕಾರದ ಮೇಳೆ ರಾಮನಾಮ ಜಪ ಮಾಡ್ತಾ ಸಾಗಲಾಗುತ್ತೆ. ಅದೇ ರೀತಿ ಮುಸ್ಲಿಂ ಬಂಧುಗಳು ಆತನ ಮೃತದೇಹ ಹೊತ್ತುಕೊಂಡು ಹೋಗುವಾಗ ರಾಮನ ಹೆಸರು ಕೂಗುತ್ತಾ ಸಾಗಿದ್ದಾರೆ. ಇದು ಅಲ್ವಾ ಭಾರತದ ಗುಣ.




Leave a Reply

Your email address will not be published. Required fields are marked *

error: Content is protected !!